ಡಿ.ವಿ. ಬಡಿಗೇರ (೩-೫-೧೯೫೧) ಚುಟುಕಗಳು ಜೇನಿನ ಹನಿಗಳು ಎಂದು ಭಾವಿಸಿ ಚುಟುಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಕವಿ ಡಿ.ವಿ. ಬಡಿಗೇರರವರು ಹುಟ್ಟಿದ್ದು ಗದಗ-ಬೆಟಗೇರಿ. ತಂದೆ ವಿರೂಪಾಕ್ಷಪ್ಪ, ತಾಯಿ ಜಾನಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಗದಗ-ಬೆಟಗೇರಿಯಲ್ಲಿ. ಕಾಲೇಜಿಗೆ ಸೇರಿದ್ದು ಜೆ.ಟಿ. ಕಾಲೇಜು ಬೆಟಗೇರಿ, ಬಿ.ಎ. ಪದವಿ. ‘ಕೆಲಸವಿಲ್ಲದಿದ್ದರಿಂದ ಕವಿಯಾದೆ’ ಎಂದು ಹೇಳಿಕೊಳ್ಳುವ ಬಡಿಗೇರರವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿದ್ದು ೧೯೭೭ರಲ್ಲಿ. ಉದ್ಯೋಗ ಸಿಕ್ಕಿತೆಂದು ಕವನ ಬರೆಯುವುದನ್ನು ನಿಲ್ಲಿಸದೆ ನಿಂತಲ್ಲಿ, ಕುಂತಲ್ಲಿ ರಚಿಸಿದ ಹನಿಗವನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಬೆಳಕು ಕಂಡಿವೆ. [sociallocker]ವಿದ್ಯಾರ್ಥಿ ದೆಸೆಯಲ್ಲಿಯೇ …
ಪೂರ್ತಿ ಓದಿ...ಬಸವಪ್ಪ ಶಾಸ್ತ್ರೀ
ಬಸವಪ್ಪ ಶಾಸ್ತ್ರೀ (೦೨.೦೫.೧೮೪೩ – ೧೮೯೧): ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ‘ಅಭಿನವ ಕಾಳಿದಾಸ’ ಎಂಬ ಬಿರುದು ಪಡೆದ ಬಸವಪ್ಪ ಶಾಸ್ತ್ರಿಗಳು ಹುಟ್ಟಿದ್ದು ೧೮೪೩ರ ಮೇ ೨ರಂದು. ತಂದೆ ಮಹದೇವ ಶಾಸ್ತ್ರಿಗಳು, ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದ ಪುರೋಹಿತರಾಗಿದ್ದವರು. ತಾಯಿ ಬಸವಂಬಿಕೆ. ತಾತನವರು (ತಂದೆಯ ತಂದೆ) ಇಂದಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನರಸಂದ್ರ (ನಾರುಸಂದ್ರ) ಗ್ರಾಮದ ರುದ್ರಾಕ್ಷಿ ಮಠಾಧ್ಯಕ್ಷರಾಗಿದ್ದ ಮುರುಡು ಬಸವಸ್ವಾಮಿಗಳು. [sociallocker]ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದು, ಮತ್ತೊಬ್ಬ ಆಸ್ಥಾನ ವಿದ್ವಾಂಸರಾಗಿದ್ದ ಗರಳಪುರಿ ಶಾಸ್ತ್ರಿಗಳಲ್ಲಿ …
ಪೂರ್ತಿ ಓದಿ...ಎಚ್.ವಿ. ಸಾವಿತ್ರಮ್ಮ
ಎಚ್.ವಿ. ಸಾವಿತ್ರಮ್ಮ (೦೨-೦೫-೧೯೧೩ – ೨೭-೧೨-೧೯೯೫): ಹಳೆ ತಲೆಮಾರಿನ ಅಪರೂಪದ ಅನುವಾದಕಿ, ಲೇಖಕಿ ಸಾವಿತ್ರಮ್ಮನವರ ಪೂರ್ಣ ಹೆಸರು ಹೆಬ್ಬಳಲು ವೆಲಪನೂರು ಸಾವಿತ್ರಮ್ಮ. ತಂದೆ ಎಂ.ರಾಮರಾವ್, ತಾಯಿ ಮೀನಾಕ್ಷಮ್ಮ. ತಂದೆ ಮೈಸೂರು ಸಂಸ್ಥಾನದಲ್ಲಿ ಉನ್ನತಾಕಾರಿಯಾಗಿದ್ದುದರಿಂದ ವರ್ಗಾವಣೆ ಅನಿವಾರ್ಯ. ಇವರಿಗೆ ವಿದ್ಯಾಭ್ಯಾಸ ಹಲವೆಡೆ-ಮಂಡ್ಯ, ಹಾಸನ, ರಾಮನಗರ, ಕೋಲಾರ, ಮೈಸೂರುಗಳಲ್ಲಿ. ೧೯೩೧ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ. ಮೂರು ಬಂಗಾರದ ಪದಕದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ. ಗುರುಗಳಾದ ಎ.ಎನ್. ಮೂರ್ತಿರಾವ್, ತೀ.ನಂ.ಶ್ರೀ ಇವರಿಂದ ಪಡೆದ ಸಾಹಿತ್ಯಾಭಿರುಚಿ. ಗಂಡ ಎಚ್.ಎ. ನಾರಾಯಣರಾಯರಿಂದ …
ಪೂರ್ತಿ ಓದಿ...ಶಶಿಕಲಾ ವೀರಯ್ಯ ಸ್ವಾಮಿ
ಶಶಿಕಲಾ ವೀರಯ್ಯ ಸ್ವಾಮಿ (೧-೫-೧೯೪೮): ಕವಯಿತ್ರಿ ಶಶಿಕಲಾರವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿ. ತಂದೆ ಸಿದ್ಧಲಿಂಗಯ್ಯ, ತಾಯಿ ಅನ್ನಪೂರ್ಣಾದೇವಿ. ಪ್ರಾಥಮಿಕ ವಿದ್ಯಾಭ್ಯಾಸ ಸಿಂದಗಿಯಲ್ಲಿ. ಕಾಲೇಜು ಕಲಿತದ್ದು ಬಿಜಾಪುರ, ಗುಲಬರ್ಗಾದಲ್ಲಿ. [sociallocker]ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ವೃತ್ತಿ ಜೀವನ ಆರಂಭಿಸಿದ್ದು ಸಿಂದಗಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ನಂತರ ಬೀದರ್ ಅಕ್ಕಮಹಾದೇವಿ ಪದವಿ ಕಾಲೇಜು, ಚಿಟಗುಪ್ಪ ಸರಕಾರಿ ಕಾಲೇಜು, ಗೋಕಾಕ್ ಕಾಲೇಜು ಬೆಳಗಾವಿ, ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ. ಯಲಹಂಕ ಸರಕಾರಿ ಜ್ಯೂ. ಕಾಲೇಜು, ಬೆಂಗಳೂರಿನ ವಾಣಿವಿಲಾಸ ಕಾಲೇಜು, …
ಪೂರ್ತಿ ಓದಿ...ಕ್ಷೀರಸಾಗರ
ಕ್ಷೀರಸಾಗರ (೩೦-೪-೧೯೦೬ – ೨೧-೨-೧೯೭೭): ಕ್ಷೀರಸಾಗರ ಕಾವ್ಯನಾಮದ ಬಿ. ಸೀತಾರಾಮ ಶಾಸ್ತ್ರಿಗಳು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ಬೆಳಗೆರೆಯಲ್ಲಿ. ತಂದೆ ಚಂದ್ರಶೇಖರ ಶಾಸ್ತ್ರಿ, ತಾಯಿ ಅನ್ನಪೂರ್ಣಮ್ಮ. ಬೆಳಗೆರೆ ವಂಶದಲ್ಲಿ ಹುಟ್ಟಿದ ಇವರ ಸಹೋದರ ಬೆಳಗೆರೆ ಕೃಷ್ಣಶಾಸ್ತ್ರಿ, ತಂಗಿಯರಾದ ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ ಎಲ್ಲರದೂ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ. [sociallocker]ಇದು ತಂದೆಯಿಂದ ಬಂದ ಬಳುವಳಿ. ತಂದೆ ಚಂದ್ರಶೇಖರ ಶಾಸ್ತ್ರಿಗಳು ಜಾನಪದ ಗೀತೆ, ಲಾವಣಿಗಳ ಅದ್ವಿತೀಯ ಹಾಡುಗಾರರು. ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗ. ಇಂಟರ್ ಮೀಡಿಯೆಟ್ ಓದಿದ್ದು ಮೈಸೂರಿನಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಪದವಿ, ಕಲ್ಕತ್ತೆಯ …
ಪೂರ್ತಿ ಓದಿ...ಸಿ.ಎನ್ . ಮುಕ್ತಾ
ಸಿ.ಎನ್ . ಮುಕ್ತಾ (೩೦.೪.೧೯೫೧): ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್. ಮುಕ್ತಾರವರು ಹುಟ್ಟಿದ್ದು ಚಿತ್ರದುರ್ಗದಲ್ಲಿ ೧೯೫೧ ರ ಏಪ್ರಿಲ್ ೩೦ ರಂದು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿಗಳು, ಇವರ ಅಣ್ಣನೇ ಪ್ರಖ್ಯಾತ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾಯರು. ತಂದೆಯ ತಾಯಿಯ ಅಣ್ಣನವರೇ ‘ಕೆಲವು ನೆನಪುಗಳು’ ಕರ್ತೃ ನವರತ್ನ ರಾಮರಾಯರು. ಮುಕ್ತಾರವರ ತಾಯಿ ಕಮಲಮ್ಮ. [sociallocker] ಪ್ರಾರಂಭಿಕ ಶಿಕ್ಷಣ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸಂತೆ ಸರಗೂರು ಹಾಗೂ ಕೆ.ಆರ್. ನಗರಗಳಲ್ಲಿ. ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ …
ಪೂರ್ತಿ ಓದಿ...ಡಾ. ಬಿ.ಪಿ. ರಾಧಾಕೃಷ್ಣ
ಡಾ. ಬಿ.ಪಿ. ರಾಧಾಕೃಷ್ಣ (೩೦.೦೪.೧೯೧೮ – ೨೬.೦೧.೨೦೧೨): ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಸಾಹಿತಿಗಳಷ್ಟೇ ಅಲ್ಲದೆ ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ದುಡಿದವರ ಪಾಲೂ ಸಾಕಷ್ಟಿದೆ. ಹೀಗೆ ಅಂತಾರಾಷ್ಟ್ರೀಯ ಭೂವಿಜ್ಞಾನಿಯಾಗಿದ್ದ, ಕರ್ನಾಟಕದಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಿದ್ದಲ್ಲದೆ ಜಲಸಂಪತ್ತನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನತೆಗೂ ಒದಗಿಸಲು ಯೋಜನೆಗಳನ್ನು ಕೈಗೊಂಡು ಕರ್ನಾಟಕದ ಏಳಿಗೆಗಾಗಿ ದುಡಿದ ರಾಧಾಕೃಷ್ಣರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ. [sociallocker] ರಾಧಾಕೃಷ್ಣರ ವಿದ್ಯಾಭ್ಯಾಸವೆಲ್ಲ ನಡೆದುದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿಯನ್ನು (ಬಿ.ಎಸ್ಸಿ.ಆನರ್ಸ್) ೧೯೩೭ರಲ್ಲಿ ಪಡೆದು ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ …
ಪೂರ್ತಿ ಓದಿ...ಸಿಸು ಸಂಗಮೇಶ
ಸಿಸು ಸಂಗಮೇಶ (೨೯.೪.೧೯೨೯ – ೨೯.೫.೨೦೦೧): ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ‘ಸಿಸು’ ಸಂಗಮೇಶರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳವೆಂಬ ಗ್ರಾಮ. ಇವರ ಮೊದಲ ಹೆಸರು ಸಂಗಮೇಶ ಸಿದ್ಧರಾಮಪ್ಪ ಮನಗೊಂಡ. ತಂದೆ ಸಿದ್ಧರಾಮಪ್ಪ, ತಾಯಿ ಗೌರಮ್ಮ. ಶಿಕ್ಷಣ ಪಡೆದುದು ವಿಜಾಪುರ ಜಿಲ್ಲೆಯ ಹಲವಾರು ಕಡೆ. [sociallocker]ಶಾಲಾ ಅಧ್ಯಾಪಕರಾಗಿ ೧೯೪೮ರಲ್ಲಿ ಉದ್ಯೋಗಕ್ಕೆ ಸೇರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೮೪ರಲ್ಲಿ ನಿವೃತ್ತರಾದರು. ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ಕವಿತೆ, ಅನುವಾದ, ಪ್ರೌಢಸಾಹಿತ್ಯ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ …
ಪೂರ್ತಿ ಓದಿ...ಪ್ರೊ. ಎ.ವಿ. ನಾವಡ
ಪ್ರೊ. ಎ.ವಿ. ನಾವಡ (೨೮-೪-೧೯೪೬):ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡರವರು ಹುಟ್ಟಿದ್ದು ಮಂಗಳೂರು ಸಮೀಪದ ಕೋಟೆಕಾರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಪ್ರಾರಂಭಿಕ ಶಿಕ್ಷಣ ಆನಂದಾಶ್ರಮದ ಶಾಲೆಯಲ್ಲಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ೫ನೇ ರ್ಯಾಂಕ್ ವಿಜೇತರು. [sociallocker]ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದ ಭಂಡಾರ್ಕರ್ಸ್ ಕಾಲೇಜು, ೧೯೭೦-೯೪ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ೨೪ ವರ್ಷ ಸೇವೆ. ೧೯೯೪ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ …
ಪೂರ್ತಿ ಓದಿ...ತ.ರಾ.ಸುಬ್ಬರಾಯ | ತ.ರಾ.ಸು.
[sociallocker]ತ.ರಾ.ಸುಬ್ಬರಾಯ (೨೧-೪-೧೯೨೦ – ೧೦-೪-೧೯೮೪): ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯಾಂದೋಲನ ಹೀಗೆ ನಾನಾ ಪ್ರಕಾರಗಳಲ್ಲಿ ದುಡಿದು ಪ್ರಖ್ಯಾತರಾದ ತ.ರಾ.ಸುಬ್ಬರಾಯರು ಹುಟ್ಟಿದ್ದು ಹರಿಹರ ತಾಲ್ಲೂಕಿನ ಮಲೆ ಬೆನ್ನೂರಿನಲ್ಲಿ. ತಂದೆ ವಕೀಲರಾಗಿದ್ದ ರಾಮಸ್ವಾಮಯ್ಯ, ತಾಯಿ ಸೀತಮ್ಮ. ಓದಿದ್ದು ಚಿತ್ರದುರ್ಗದಲ್ಲಿ ಮೆಟ್ರಿಕ್ವರೆಗೆ. ಇಂಟರ್ ಮೀಡಿಯೆಟ್ ಸೇರಿದರಾದರೂ ಪೂರ್ಣಗೊಳಿಸಲಿಲ್ಲ. ಆದರೆ ಸಾಹಿತ್ಯ ಇವರ ವಂಶಕ್ಕೆ ಪಾರಂಪರ್ಯವಾಗಿ ಬಂದ ಬಳುವಳಿ. ದೊಡ್ಡಪ್ಪ ಟಿ.ಎಸ್. ವೆಂಕಣ್ಣಯ್ಯನವರದು ಒಂದೆಡೆ, ಚಿಕ್ಕಪ್ಪ ತ.ಸು.ಶಾಮರಾಯರದು ಮತ್ತೊಂದೆಡೆ ದೊರೆತ ಸಾಹಿತ್ಯ ಪ್ರೇರಣೆ. ತ.ರಾ.ಸು.ಗೆ ಅಸಾಧ್ಯ ಓದು ಬರಹದ ಹುಚ್ಚು. ಒಂದು ಸಾರೆ ವೆಂಕಣ್ಣಯ್ಯನವರು, ಮಾತನಾಡಿದಷ್ಟು ಬರವಣಿಗೆ ಸುಲಭವಲ್ಲವೆಂದು ರೇಗಿಸಿದಾಗ ‘ಪುಟ್ಟನ …
ಪೂರ್ತಿ ಓದಿ...