ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ (೧೨-೪-೧೯೩೨ – ೧೯-೧೧-೨೦೦೭): ಜಾನಪದ ತಜ್ಞ, ಸಂಶೋಧಕ, ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ. ತಂದೆ ಶಿವಪ್ಪ, ತಾಯಿ ಬಸವಮ್ಮ. ಪ್ರೈಮರಿ ವಿದ್ಯಾಭ್ಯಾಸ ನಡೆದುದು ಹಿರೇಬಾಗೇವಾಡಿಯಲ್ಲಿ. ಕಾಲೇಜಿಗೆ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಬಿ.ಎ. ಆನರ್ಸ್ ಪದವಿ. ಪೂನ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ಒಂದು ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವಿ. ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಮತ್ತದೇ ಸಂಸ್ಥೆಯ …
ಪೂರ್ತಿ ಓದಿ...ನೀರ್ಪಾಜೆ ಭೀಮಭಟ್ಟ
ನೀರ್ಪಾಜೆ ಭೀಮಭಟ್ಟ (೧೨.೦೪.೧೯೩೪ – ೧೨.೧೨.೨೦೦೨): ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ‘ರಾಜತರಂಗಿಣಿ’ ಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರಕ್ಕೆ ಪಾತ್ರರಾದ ನೀರ್ಪಾಜೆ ಭೀಮಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ೧೯೩೪ರ ಏಪ್ರಿಲ್ ೧೨ರಂದು. ತಂದೆ ಶಂಕರಭಟ್ಟರು, ತಾಯಿ ಲಕ್ಷ್ಮೀ ಅಮ್ಮ. ಸಂಸ್ಕೃತ ಶಿಕ್ಷಣ ಪಡೆದದ್ದು ಕಾಸರಗೋಡು ತಾಲ್ಲೂಕು ಪೆರಡಾಲದ ನೀರ್ಚಾಲಿನ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಓದಿ ಸಾಹಿತ್ಯ ಶಿರೋಮಣಿ ಪದವಿಯ ಜೊತೆಗೆ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ವಿಶಾರದರು. ವಿದ್ಯಾರ್ಥಿದೆಸೆಯಲ್ಲಿಯೇ ರಚಿಸಿದ್ದು ಕಾಶ್ಮೀರ …
ಪೂರ್ತಿ ಓದಿ...ಎಸ್.ಎಂ.ವೀರಭದ್ರಪ್ಪ
ಎಸ್.ಎಂ.ವೀರಭದ್ರಪ್ಪ (೧೨.೪.೧೯೨೨ – ೨೭.೨-೧೯೬೬): ನಾಟಕ ರಂಗದ ಆತ್ಮೀಯರಲ್ಲಿ ’ಐನೋರು’ ಎಂದೇ ಪ್ರಸಿದ್ಧರಾಗಿದ್ದ ರಂಗಭೂಮಿಯ ನಟ ವೀರಭದ್ರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಮಾರನಾಯ್ಕನಹಳ್ಳಿ. ಬಾಲ್ಯದಿಂದಲೇ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಆಕರ್ಷಿತರಾಗಿ ಇಡೀ ರಾತ್ರಿ ಕುಳಿತು ವೀಕ್ಷಿಸುತ್ತಿದ್ದ ನಾಟಕಗಳು. ಅಭಿನಯ ಕಲೆ ಎಂದರೆ ಪಂಚಪ್ರಾಣ. ದೊಡ್ಡ ನಟನಾಗಬೇಕು. ಭೀಮ, ಘಟೋತ್ಕಜರಂತಹ ಪಾತ್ರ ಮಾಡಬೇಕೆಂಬ ಹಿರಿದಾದ ಆಸೆ. ಆದರೆ ನಾಟಕ ನಂಬಿ ಹೊಟ್ಟೆ ತುಂಬದೆಂದು ಆರಿಸಿಕೊಂಡಿದ್ದು ಶಿಕ್ಷಣ ಕ್ಷೇತ್ರ. ತುಮಕೂರಿನ ನಾರ್ಮಲ್ ಸ್ಕೂಲಿನಿಂದ ಪಡೆದ ವಿ.ಟಿ.ಸಿ ತರಬೇತಿ, ಚಿತ್ರದುರ್ಗದಲ್ಲಿ ಕೈಗೊಂಡ ಉಪಾಧ್ಯಾಯರ ವೃತ್ತಿ. ಆರುವರ್ಷಗಳ ಕಾಲ …
ಪೂರ್ತಿ ಓದಿ...ಎಂ.ಶ್ರೀನಾಥ್ ಮರಾಠೆ
ಎಂ.ಶ್ರೀನಾಥ್ ಮರಾಠೆ (೧೯೪೪): ತಮ್ಮ ಸಿರಿಕಂಠದಿಂದ ಪ್ರಖ್ಯಾತರಾಗಿರುವ ಶ್ರೀನಾಥ ಮರಾಠೆಯವರು ಹುಟ್ಟಿದ್ದು ಕಾರ್ಕಳ ತಾಲ್ಲೂಕಿನ ಮಾಳ ಎಂಬಲ್ಲಿ. ತಂದೆ ಮಹಾದೇವ ಮರಾಠೆ, ತಾಯಿ ಅನ್ನಪೂರ್ಣ. ವಿದ್ಯಾಭ್ಯಾಸ ಹೈಸ್ಕೂಲು ವರೆಗೆ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಗಾಯನದತ್ತ ಬೆಳೆದ ಒಲವು ದೇವರ ನಾಮ ಹಾಡುಗಾರಿಕೆಯ ಹಲವಾರು ಸ್ಫರ್ಧೆಗಳಲ್ಲಿ ಬಹುಮಾನ ವಿಜೇತರು. ಇವರ ಸಂಗೀತದ ಆಸಕ್ತಿಗೆ ಪ್ರೋತ್ಸಾಹ ನೀಡಿದವರು ಎಚ್.ಗಣಪತಿಭಟ್ ಪಾಠಕ್ ಮತ್ತು ಡಿ. ವಿಶ್ವನಾಥ ಪಾಠಕ್ರವರು. ೧೬ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಪ್ರಾರಂಭ. ಕೆ.ವಿ. ಸುಬ್ರಹ್ಮಣ್ಯ ಅಯ್ಯರ್ ರವರಲ್ಲಿ ಗುರುಕುಲ ಪದ್ಧತಿಯಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮುಂದುವರೆದ ವಿದ್ಯಾಭ್ಯಾಸಕ್ಕಾಗಿ ಸೇರಿದ್ದು …
ಪೂರ್ತಿ ಓದಿ...ಮುಜಾವರ ಅಸಿಫ ಅಲಿ
ಮುಜಾವರ ಅಸಿಫ ಅಲಿ (೧೧-೪-೧೯೫೩ – ೧೯೯೬): ಸಾಹಿತ್ಯ, ಛಾಯಾಗ್ರಹಣ ಕಲೆಯಲ್ಲಿ ಪರಿಣತರಾಗಿದ್ದ ಮುಜಾವರರು ಹುಟ್ಟಿದ್ದು ಬೈಲಹೊಂಗಲ ತಾಲ್ಲೂಕು ತುರಮುರಿಗ್ರಾಮ. ತಂದೆ ಹುಸೇನಸಾಬ, ತಾಯಿ ಇಮಾಮಬಿ. ಓದಿದ್ದು ಎಸ್.ಎಸ್.ಎಲ್.ಸಿ. ಪಾಸಾದ ನಂತರ ಆರ್ಥಿಕ ತೊಂದರೆಯಿಂದ ಮುಂದೆ ಓದಲಾರದೆ ಸೇರಿದ್ದು ಪೊಲೀಸ್ ಇಲಾಖೆಗೆ. ಬೆಳಗಾವಿ ಉಪನಗರದ ವಡಗಾವಿಯ ಪೊಲೀಸ್ ಠಾಣೆಯಲ್ಲಿ ಉದ್ಯೋಗ. ಅಪರಾಗಳಿಗೆ ಸಂಬಂಸಿದ ಕಡತಗಳನ್ನು ನ್ಯಾಯಾಲಯಕ್ಕೆ ಹೊತ್ತೊಯ್ಯುವ ಕೆಲಸ. ಪೊಲೀಸ್ ಠಾಣೆಯ ಎದುರಿಗಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪಾಟೀಲರ ಸ್ನೇಹದಿಂದ ಸಾಹಿತ್ಯ ರಚನೆಯ ಕಡೆ ಬೆಳೆದ ಒಲವು. ಕಥೆ, ಕವನ, ಕಾದಂಬರಿಗಳ ಬಗ್ಗೆ ಬಿಡುವಿನ …
ಪೂರ್ತಿ ಓದಿ...ಚಿ.ನ. ಮಂಗಳಾ
ಚಿ.ನ. ಮಂಗಳಾ (೧೦.೪.೧೯೩೮ – ೩೦.೫.೧೯೯೭): ಶಿಕ್ಷಣ ತಜ್ಞೆ ಚಿ.ನ. ಮಂಗಳಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ. ನರಸಿಂಹಮೂರ್ತಿ, ತಾಯಿ ರಾಜೇಶ್ವರಿ. ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರು. ಎಸ್.ಎಸ್.ಎಲ್.ಸಿ. ಓದಿದ್ದು ಮಂಡ್ಯ. ತಂದೆ ಮುಖ್ಯ ಕಾರ್ಯದರ್ಶಿಯಾಗಿದ್ದರಿಂದ ಮಡಿಕೇರಿಗೆ ವರ್ಗ. ಕಾಲೇಜಿಗೆ ಸೇರಿದ್ದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ (ಇಂಗ್ಲಿಷ್) ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಪದವಿ. ಪದವಿ ಗಳಿಸಿದ ನಂತರ ಅಧ್ಯಾಪಕಿಯಾಗಿ ೧೯೫೯ರಲ್ಲಿ ಸೇರಿದ್ದು ಬೆಂಗಳೂರಿನ ಎ.ಪಿ.ಎಸ್. ಕಾಲೇಜು. ದೆಹಲಿಯ ಅಮೆರಿಕ ಶಿಕ್ಷಣ ಪ್ರತಿಷ್ಠಾನ, ವಾಷಿಂಗ್ಟನ್ ವಿದ್ವಾಂಸರ …
ಪೂರ್ತಿ ಓದಿ...ಬಿ.ಆರ್.ಗೋವಿಂದಸ್ವಾಮಿ
ಬಿ.ಆರ್.ಗೋವಿಂದಸ್ವಾಮಿ (೧೦.೪.೧೯೧೭ – ೨೫.೧.೧೯೬೬): ಸುಪ್ರಸಿದ್ಧ ಪಿಟೀಲು ವಿದ್ವಾಂಸರಾದ ಗೋವಿಂದಸ್ವಾಮಿಯವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ತಂದೆ ರಾಮಯ್ಯ. ತಾಯಿ ನಾಗಮ್ಮ. ತಂದೆ ಮೃದಂಗ ವಿದ್ವಾಂಸರಾಗಿದ್ದರೆ, ಚಿಕ್ಕಪ್ಪ ಕರ್ನಾಟಕ ಸಂಗೀತ ಗಾಯಕರು ಮತ್ತು ಪಿಟೀಲು ವಾದಕರು. ಸಂಗೀತಗಾರರ ವಂಶ. ಸಾಮಾನ್ಯ ವಿದ್ಯಾಭ್ಯಾಸಕ್ಕಿಂತ ಸಂಗೀತದ ಕಡೆಗೆ ಬೆಳೆದ ಹೆಚ್ಚು ಒಲವು. ಚಿಕ್ಕಪ್ಪನವರಿಂದಲೇ ಪಿಟೀಲು ಮೊದಲ ಪಾಠ, ನಂತರ ಮೃದಂಗ ವಿದ್ವಾನ್ ಎಚ್.ಪುಟ್ಟಚಾರಿಯವರಲ್ಲಿ ಮುಂದುವರೆದ ಸಂಗೀತ ಸಾಧನೆ. ಪಿಟೀಲು ವಾದನದಲ್ಲಿ ಗಳಿಸಿದ ಪ್ರಭುತ್ವ. ಪ್ರಸಿದ್ಧ ಗಾಯಕರಾದ ಬಿ.ಎಸ್.ಅಯ್ಯಂಗಾರ್ ಮತ್ತು ಮೃದಂಗ ವಿದ್ವಾನ್ ಪುಟ್ಟಚಾರಿಯವರೊಡನೆ ಕೈಗೊಂಡ ಭಾರತ ಪ್ರವಾಸ. ಸಿಕಿಂದರಾಬಾದ್, ಪುಣೆ, …
ಪೂರ್ತಿ ಓದಿ...ಜಿ. ವೆಂಕಟಯ್ಯ
ಜಿ. ವೆಂಕಟಯ್ಯ (೧೦.೦೪.೧೯೧೬ – ೨೨.೦೯.೧೯೭೯): ಅಕ್ಷರ ಜ್ಞಾನವೇ ಇಲ್ಲದ ದಲಿತಜನಾಂಗದಿಂದ ಸಾಹಿತ್ಯ ನಿರ್ಮಾಣವನ್ನು ನಿರೀಕ್ಷಿಸಲಾಗದ ಸಂದರ್ಭದಲ್ಲಿ ಅಕ್ಷರ ಕಲಿತು ಸಾಹಿತ್ಯರಚನೆಯಲ್ಲಿ ತೊಡಗಿದ ಜಿ. ವೆಂಕಟಯ್ಯನವರು ಹುಟ್ಟಿದ್ದು ೧೯೧೬ರ ಏಪ್ರಿಲ್ ೧೦ರಂದು ಮಂಡ್ಯ ಜಿಲ್ಲೆಯ ಮದ್ದೂರ್ ತಾಲ್ಲೂಕಿನ ಹೆಮ್ಮನ ಹಳ್ಳಿಯಲ್ಲಿ. ತಂದೆ ಗಿರಿಯಯ್ಯ, ತಾಯಿ ಸಿದ್ಧಮ್ಮ. ಮೊದಲಮಗನಾಗಿ ಹುಟ್ಟಿದ ವೆಂಕಟಯ್ಯನವರು ಅಕ್ಷರ ಜ್ಞಾನ ಸಂಪಾದಿಸಿದ್ದರಿಂದ ನಂತರ ಹುಟ್ಟಿದವರಿಗೂ ಅಕ್ಷರದ ಅದೃಷ್ಟದಿಂದ ಒಬ್ಬ ತಮ್ಮ ಜಿ. ಗೋಪಾಲ್ ವೈದ್ಯರಾಗಿದಷ್ಟೇ ಅಲ್ಲದೆ ವಿದೇಶ ಪ್ರವಾಸ ಕುರಿತು ‘ವಿದೇಶ ಪ್ರವಾಸ’ ಹಾಗೂ ‘ಮೈಸೂರಿನಿಂದ ಮೆಕ್ಸಿಕೊ’ ಎಂಬ ಎರಡು ಪ್ರವಾಸ …
ಪೂರ್ತಿ ಓದಿ...ಮಂಗಳಾ ಸತ್ಯನ್
ಮಂಗಳಾ ಸತ್ಯನ್ (೧೦.೪.೧೯೪೦): ಸಾಹಿತ್ಯ, ಸಂಗೀತ, ಸಮಾಜಸೇವೆ – ಹೀಗೆ ಒಂದಲ್ಲೊಂದು ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಮಂಗಳಾ ಸತ್ಯನ್ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ೧೯೪೦ ರ ಏಪ್ರಿಲ್ ೧೦ ರಂದು. ತಂದೆ ಪ್ರಖ್ಯಾತ ವಕೀಲರಾಗಿದ್ದ ಸಾಲಗಾಮ ಸುಬ್ಬರಾಯರು, ತಾಯಿ ಗುಂಡಮ್ಮ. ಹುಟ್ಟಿದೂರಿನಲ್ಲಿ ಪಡೆದ ಶಿಕ್ಷಣ. ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಕಥೆ ಹೇಳುವ, ಕಥೆ ಕೇಳುವ ಹವ್ಯಾಸ. ಪ್ರತಿದಿನದ ನೀತಿಕಥೆಗಳು ಪೀರಿಯಡ್ನಲ್ಲಿ ಚಂದಮಾಮ, ಬಾಲಮಿತ್ರದ ಕಥೆಗಳನ್ನೂ ಓದಿಕೊಂಡು, ಮನೆಯಲ್ಲಿ ಹಿರಿಯರಿಂದ ಕಥೆ ಕೇಳಿಕೊಂಡು ಹೋಗಿ ಹೇಳಬೇಕಿತ್ತು. ಹೀಗೆ ಇವರ ಸರದಿ ಬಂದಾಗ ಪ್ರತಿಸಾರಿಯೂ ಕೇಳಿದ, …
ಪೂರ್ತಿ ಓದಿ...ಆರ್.ನರಸಿಂಹಾಚಾರ್
ಆರ್.ನರಸಿಂಹಾಚಾರ್: ಕನ್ನಡ ಸಾಹಿತ್ಯ ಲೋಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಅಪ್ರತಿಮ ಕೊಡುಗೆದಾರರೆನಿಸಿದ್ದಾರೆ. ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ ಬಹದ್ದೂರ್ ಆರ್. ನರಸಿಂಹಾಚಾರ್. ಅವರು ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು. ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು. ಕರ್ನಾಟಕ ಕವಿ ಚರಿತ್ರೆ: ಕನ್ನಡ ಭಾಷೆ ಮತ್ತು ಕವಿ-ಕಾವ್ಯದ ಬಗ್ಗೆ ಯಾವುದೇ ಮಾಹಿತಿ ಬೇಕಾದರೆ ಇಂದಿಗೂ ನಮಗೆ ಆಸರೆ …
ಪೂರ್ತಿ ಓದಿ...