Recent Posts

ಹಕ್ಕಿಯ ಹಾಡಿಗೆ ತಲೆದೂಗುವ ಹೂ.. | hakkiya haadige taledooguva hoo

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ. ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ. ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ. ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ. ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ. ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ. ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ. ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ. ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ. ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.

ಪೂರ್ತಿ ಓದಿ...

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ

indian former

ನೇಗಿಲ ಯೋಗಿಯ ಈ ಹಾಡು ನಮ್ಮ ರೈತರಿಗೆ ದೊರೆತ ಬಹು ದೊಡ್ಡ ಸನ್ಮಾನವೆಂದು ನನಗನಿಸುತ್ತದೆ. ಅಂತ ಒಂದು ಸನ್ಮಾನ ವಿಶ್ವಮಾನವ ಕುವೆಂಪು‘ರವರಿಂದ ದೊರಕಿರುವುದು ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಕಾಮನಬಿಲ್ಲು ಚಿತ್ರವನ್ನು ನಾನಿನ್ನೂ ವೀಕ್ಷಿಸಿಲ್ಲ, ಹಾಡನ್ನೂ ಕೂಡ. ಆದರೆ ಈ ಹಾಡು ನಮ್ಮ ಕವಿಗಳ ಕಡೆಯಿಂದ ರೈತರಿಗೆ ಸರ್ವಕಾಲಿಕ ಕೊಡುಗೆ. ಅದೇ ಕಾರಣಕ್ಕೇನೋ ಈ ಹಾಡು ನಮ್ಮ ರಾಜ್ಯದ ರೈತರ ಹಾಡಾಗಿ ಸ್ವೀಕರಿಸಲಾಗಿದೆ. ಈ ಹಾಡಿನಲ್ಲಿ ಯಾವದೇ ಕೊರತೆಗಳಿಲ್ಲ. ಆರಂಭದಿಂದ ಅಂತ್ಯದವರೆಗೂ ನಮ್ಮನ್ನು ಮಗ್ನಗೊಳಿಸುತ್ತದೆ. ಸರಿಯಾಗಿ ಆಲಿಸಿದ್ದೆ ಆದಲ್ಲಿ, ರೋಮಾಂಚನಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಈ ಹಾಡಿನಲ್ಲಿ ಇರುವ …

ಪೂರ್ತಿ ಓದಿ...

ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳುತ್ತಿದ್ದರೆ, ಇಗ್ನೋರ್‌ ಮಾಡಬೇಡಿ ಎಚ್ಚರವಿರಲಿ..

bad dream

ಒಂದು ವೇಳೆ ನೀವು ನಿದ್ರೆಯಲ್ಲಿ ಪದೇ ಪದೇ ಕನಸು ಕಾಣುತ್ತಿದ್ದರೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೇ ಇದ್ದರೆ ನೀವು ಎಚ್ಚರದಿಂದ ಇರಲೇಬೇಕು. ಹೀಗೆ ಮುಂದುವರೆದರೆ ನೀವು ಪೋಸ್ಟ್‌ ಟ್ರಾಮ್ಯಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ಗೆ ಗುರಿಯಾಗಲಿದ್ದೀರಿ. ಈ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿ ಬೇಗನೆ ವಿಚಲಿತರಾಗುತ್ತಾರೆ ಹಾಗೂ ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಮನೋವಿಜ್ಞಾನಿ ಡಾ. ಪ್ರಶಾಂತ್‌ ಶುಕ್ಲ ತಿಳಿಸಿದ್ದಾರೆ. ಡಾ. ಶುಕ್ಲಾ ಅವರು ತಮ್ಮ ಸಂಶೋಧನೆಯ ಮೂಲಕ ಹೇಳಿರುವಂತೆ ಬಾಲ್ಯದಲ್ಲಿ ಮನಸ್ಸಿಗೆ ಏನಾದರು ಆಘಾತ ಉಂಟಾದರೆ ಅಥವಾ ಕುಟುಂಬದಲ್ಲಿ ಏನಾದರು ಆಘಾತ ಉಂಟಾದರೆ ಈ …

ಪೂರ್ತಿ ಓದಿ...
  • ವಿಶ್ವನಂದಿನಿ ಲೇಖನ ಮಾಲೆ – 019

    (ವೈಷ್ಣವಬಾಂಧವರೇ, ಶ್ರೀ ಹರಿಭಕ್ತಿಸಾರ ಭಗವಂತನ ಮುಂದೆ ಭಕ್ತವರೇಣ್ಯರಾದ ಶ್ರೀ ಕನಕದಾಸರ ಮಾಡಿಕೊಂಡ ನಿವೇದನೆ ಎಂದು ಹಿಂದೆಯೇ ತಿಳಿಸಿದೆ. ಇದನ್ನು ಉಳಿದ ವಿಶ್ವನಂದಿನಿಯ ಲೇಖನಗಳಂತೆ ಓದಬೇಡಿ. ನಿಮ್ಮ ಕೊಠಡಿಯ ಕದವಿಕ್ಕಿಕೊಂಡು, ಅಥವಾ ಸಾಧ್ಯವಾದರೆ ದೇವರ ಮುಂದೆ ಕುಳಿತು ಸುತ್ತಲಿನ ಪ್ರಪಂಚವನ್ನು ಮರೆತು ಓದುತ್ತ ಹೋಗಿ. ಎದುರಿನಲ್ಲಿ ನಿಮ್ಮೊಡೆಯ ಕುಳಿತಿದ್ದಾನೆ, ನಿಮ್ಮ ಭಕ್ತಿಯ ಮಾತನ್ನು ಕೇಳುತ್ತಿದ್ದಾನೆ ಎನ್ನುವ ನಿಶ್ಚಯದಿಂದ ಓದುತ್ತ ಹೋಗಿ, ಶ್ರೀ ಕನಕದಾಸರ ದಿವ್ಯವಾದ ಮಾತುಗಳಲ್ಲಿ ತತ್ವಾಭಿಮಾನಿದೇವತೆಗಳ ಸನ್ನಿಧಾನವಿದೆ, ಶ್ರೀಮದಾಚಾರ್ಯರ ಸಿದ್ಧಾಂತದ ಸಾರವಿದೆ ಹೀಗಾಗಿ ಪರಮಾತ್ಮ ಪ್ರೀತಿಯಿಂದ ಅದನ್ನು ಕೇಳುತ್ತಾನೆ. ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ನಿಮ್ಮೊಳಗಿನ …

    ಪೂರ್ತಿ ಓದಿ...
  • vishwanandini-004

    ವಿಶ್ವನಂದಿನಿ ಲೇಖನ ಮಾಲೆ – 004

  • king

    ಆತ್ಮ ಚೌರ್ಯ

    ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ ಸುಪ್ರಭಾತದಿಂದ ಹಿಡಿದು ಶಯನ ಗೃಹಕ್ಕೆ ದೊರೆ ಹೋಗುವವರೆಗೂ ಅವನ ಎಲ್ಲ ಬೇಕು ಬೇಡಗಳನ್ನು ಇವನೇ ನೋಡಿಕೊಳ್ಳುವನು. ಒಂದು ದಿನ ಅವನಿಗೊಂದು ಕೆಟ್ಟ ಆಲೋಚನೆ ಬಂತು. ಯಾರದೋ ದುರ್ಬೋಧನೆ. ” ಎಷ್ಟು ದಿನ ಈ ಊಳಿಗ! ಇನ್ನಾದರೂ ನೆಮ್ಮದಿ ಬೇಡವೇ ” ಎಂದೆಲ್ಲ. ದೊರೆ ಮಲಗುವ ಮುನ್ನ ತನ್ನೆಲ್ಲ ಆಭರಣಗಳನ್ನೂ ಕಳಚಿ ಇವನ ಕೈಗೇ ಕೊಡುತ್ತಿದ್ದ. ಈ ವೃದ್ಧ ಸೇವಕ ಅವನ್ನೆಲ್ಲಾ ಒಪ್ಪವಾಗಿ ತೆಗೆದಿಟ್ಟು …

    ಪೂರ್ತಿ ಓದಿ...
  • old couple

    ಸುಖೀ ದಾಂಪತ್ಯದ ಗುಟ್ಟು

  • ಅಲೆಮಾರಿಗಳ ‘ಬುಡ್ಗನಾದ’

    ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …

    ಪೂರ್ತಿ ಓದಿ...
  • ಕೋಳಿ ಅಂಕ

    ಕೋಳಿ ಅಂಕ

  • kolata

    ಕೋಲಾಟ

  • nambikegalu

    ಜನಪದ ನಂಬಿಕೆಗಳು

  • marriage

    ಮದುವೆ ಮನೆಯಲ್ಲಿ ಜರೆಯುವ ಹಾಡು

  • Kumaravyasa

    ಕುಮಾರವ್ಯಾಸ

    ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …

    ಪೂರ್ತಿ ಓದಿ...
  • ಕನ್ನಡ ಕವಿಗಳ ಕಾವ್ಯ ಕಲ್ಪನೆ

  • ಭರತೇಶ ವೈಭವ

  • ರತ್ನಾಕರ ವರ್ಣಿ

  • ಪಂಪ

  • Master Hiranayya

    ಮಾಸ್ಟರ್ ಹಿರಣ್ಣಯ್ಯ

    ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …

    ಪೂರ್ತಿ ಓದಿ...
  • ಮರಿಯಪ್ಪ ನಾಟೇಕರ್

  • ಮಂಡ್ಯ ರಮೇಶ್

  • ಬಿ.ಜಯಮ್ಮ

  • ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

  • yamuna murthy

    ಯಮುನಾ ಮೂರ್ತಿ

    ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …

    ಪೂರ್ತಿ ಓದಿ...
  • pratibha prahlad

    ಪ್ರತಿಭಾ ಪ್ರಹ್ಲಾದ್

  • udayashankar

    ಮಹಾನ್ ನೃತ್ಯ ಕಲಾವಿದ ಉದಯಶಂಕರ್

  • sahana

    ಸಹನಾ ಚೇತನ್

  • yamini

    ಯಾಮಿನಿ ಕೃಷ್ಣಮೂರ್ತಿ

ಸೊಬಗು: ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ನಮ್ಮ ತಾಣ (ನಮ್ಮ ಕನ್ನಡ ನಾಡು) ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ, ಜನಪದಬಲ ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Google+ Publisher