Recent Posts

ಹಳ್ಳಿ ಆಟಗಳಿಗೆ ಮಾರು ಹೋದ ಸಿಟಿಗರು

1-2

ಕ್ಯಾಂಡಿಕ್ರಶ್‌ನಂಥ ವಿಡಿಯೋ ಗೇಮ್‌ ಹಾಗೂ ಮೊಬೈಲ್‌ನಲ್ಲಿ ಸಿಗುವ ಗೇಮ್‌ಗಳು ನಗರಕ್ಕೆ ಮಾತ್ರ ಸೀಮಿತ. ಹಳ್ಳಿಯಲ್ಲಿ ಏನಿದ್ದರೂ ಚೌಕಾಬಾರ, ಪಗಡೆ, ಹಾವು ಏಣಿ ಆಟ ರೂಢಿ ಅನ್ನುವ ಕಾಲ ಈಗಿಲ್ಲ. ಕಾಲಚಕ್ರ ಉರುಳಿದೆ. ಹಳ್ಳಿ ಆಟಗಳಿಗೂ ಸಿಟಿಗಳಲ್ಲಿ ವಿಪರೀತ ಡಿಮಾಂಡ್‌ ಕ್ರಿಯೇಟ್‌ ಆಗುತ್ತಿದೆ. ಹಳ್ಳಿ ಸೊಗಡಿನ ಸಾಂಪ್ರದಾಯಿಕ ಆಟಗಳು ಸಿಟಿಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆಯಲ್ಲದೆ, ಅದೇ ಟ್ರೆಂಡ್‌ ಆಗಿ ಹವಾ ಆಗಿಬ್ಟಿಟಿದೆ. ಅದಕ್ಕಾಗಿಯೇ ಅನೇಕ ಹಳ್ಳಿ ಆಟಗಳನ್ನು ಕಲಿಸುವ, ಆಡಿಸುವ ಗೇಮ್‌ ಸೆಂಟರ್‌ಗಳು ನಗರದಲ್ಲಿ ತಲೆ ಎತ್ತಿವೆ. ಅಷ್ಟೇ ಅಲ್ಲ, ಮಕ್ಕಳಿಗೆ ಇಂಥ ಆಟಗಳನ್ನು ಕಲಿಸುವ, …

ಪೂರ್ತಿ ಓದಿ...

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ಹೆಂಗಸಿನ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆಯನ್ನೂ ಸಹ ದೂಷಿಸುತ್ತ, ‘ಹೆಣ್ಣು ಹೆರಲಿಕ್ಕೆಂದೇ ಇರುವ ಯಂತ್ರವಲ್ಲ, ಅಡುಗೆ ಮನೆಗೆ ಸೀಮಿತಳಲ್ಲ. ಗಂಡಿಲ್ಲದೆಯೂ ಹೆಣ್ಣು ಪರಿಪೂರ್ಣಳು. ಪುರುಷನೆಂಬ ವೃಕ್ಷ ಕ್ಕೆ ಹಬ್ಬುವ ಬಳ್ಳಿಯಲ್ಲ ಹೆಣ್ಣು, ಅವನ ಅಸ್ತಿತ್ವವನ್ನು ಹಿಡಿದು ಭದ್ರಗೊಳಿಸುವ ಬೇರು ಹೆಣ್ಣು. ಹೆಣ್ಣು ಗಂಡು ಪ್ರಕೃತಿಯ ದೃಷ್ಟಿಯಲ್ಲಿ ಸರಿ ಸಮಾನರಾಗಿರುವಾಗ ಸಾಮಾಜಿಕವಾಗಿ ಸಮಾನತೆ ಹೆಣ್ಣಿಗೇಕೆ ದೊರೆಯುತ್ತಿಲ್ಲ’ ಎಂದೆಲ್ಲ ಭಯಂಕರ ಭಾಷಣಕ್ಕೆ ನಿಂತರೆ ಅವಳನ್ನು ಮೀರಿಸಲು ಯಾರಿಂದಲೂ ಶಕ್ಯವಿಲ್ಲ. ಮರುದಿನ ಪ್ರತಿಷ್ಠಿತ ಕಾಲೇಜಿನಲ್ಲಿ ‘ಹೆಣ್ಣಿಗೆ ಸಮಾನತೆ ಬೇಕೇ ಬೇಡವೇ’ ಎಂಬ ವಿಷಯದ ಮೇಲಿನ ಚರ್ಚಾಸ್ಪರ್ಧೆಯಲ್ಲಿ ವಿಷಯದ …

ಪೂರ್ತಿ ಓದಿ...

ಆದರ್ಶ ರಾಜಕಾರಣಿ – ಭೀಮಸೇನ

bheemasena

ಮಹಾಭಾರತದ ಯುದ್ಧಾನಂತರ ಧರ್ಮರಾಜನು ಪಟ್ಟಾಭಿಷಿಕ್ತನಾಗಿ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಭೀಮಾರ್ಜುನರ ಸಹಾಯದಿಂದ ರಾಜ್ಯಭಾರವನ್ನು ನಡೆಸುತ್ತಿದ್ದನು. ಕ್ಷತ್ರಿಯ ಸಂಪ್ರದಾಯದಂತೆ ಧೃತರಾಷ್ಟ್ರನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಅರಣ್ಯಕ್ಕೆ ಹೋಗಬೇಕಾಗಿತ್ತು. ಅದರಲ್ಲೂ ತನ್ನ ಪುತ್ರವ್ಯಾಮೋಹದ ತಪ್ಪಿನಿಂದ ಕುರುಕ್ಷೇತ್ರದಲ್ಲಿ ಘೋರವಾದ ಯುದ್ಧವು ನಡೆದು, ಎಲ್ಲ ಮಕ್ಕಳನ್ನೂ ಕಳೆದುಕೊಂಡ ದುರಂತವು ನಡೆದ ಬಳಿಕವೂ ಧೃತರಾಷ್ಟ್ರನಲ್ಲಿ ವೈರಾಗ್ಯವಾಗಲೀ, ಪಶ್ಚಾತ್ತಾಪಗಳಿಂದ ರಾಜ್ಯದ ವೈಭವವನ್ನು ತ್ಯಜಿಸುವ ಮನೋಭಾವನೆಯಾಗಲಿ ಉಂಟಾಗಲಿಲ್ಲ. ಧರ್ಮರಾಜನ ರಾಜೋಪಚಾರವನ್ನು ಪಡೆಯುತ್ತಾ ರಾಜ್ಯದ ಸುಖಭೋಗಗಳಲ್ಲಿಯೇ ಮಗ್ನನಾಗಿದ್ದ. ಭೀಮಸೇನನ ಮತ್ತು ವಿದುರನ ಉಪದೇಶದ ಪರಿಣಾಮವಾಗಿ ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅರಣ್ಯಕ್ಕೆ ಹೋಗಲು ಸಿದ್ಧನಾದನು. ಯುದ್ಧದಲ್ಲಿ ಮಡಿದ ತನ್ನ ಮಕ್ಕಳಾದ …

ಪೂರ್ತಿ ಓದಿ...
  • vishwanandini-009

    ವಿಶ್ವನಂದಿನಿ ಲೇಖನ ಮಾಲೆ – 009

    ಮಾಧ್ವರು ಎಂದರೆ ಹೇಗಿರಬೇಕು? (ಈ ಹೆಸರಿನ ಲೇಖನಗುಚ್ಛಗಳಲ್ಲಿ ನಾವು ಮಾಧ್ವರು ಹೇಗಿರಬೇಕು, ಹೇಗಿರಬಾರದು ಎನ್ನುವದನ್ನು ವಿಶ್ಲೇಷಿಸುತ್ತ ಹೋಗುತ್ತೇನೆ) ಪ್ರಶ್ನೆ ಅಂತಾ ಕೇಳುವ ಮುನ್ನ…. ಪ್ರಶ್ನೆ ಕೇಳುವದು ಎಂದಿಗೂ ನಮ್ಮನ್ನು ಸಣ್ಣವರನ್ನಾಗಿಸುವದಿಲ್ಲ. ಆದರೆ ಕೇಳುವ ಶೈಲಿ ನಮ್ಮನ್ನು ಸಣ್ಣವರನ್ನಾಗಿಸಿ ಬಿಡುತ್ತದೆ. ಕಾರಣ ಮಾತು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಆ ವ್ಯಕ್ತಿತ್ವ ಎಷ್ಟು ತೂಕದ್ದೊ ನಮ್ಮ ಮಾತೂ ಅಷ್ಟೇ ತೂಕದ್ದಾಗಿರುತ್ತದೆ. ನಾವು ಮಾಡುವ ಪ್ರಶ್ನೆಯ ಮೇಲೆ ನಮ್ಮ ಯೋಗ್ಯತೆ ಎಂಥದ್ದು, ಅಭಿರುಚಿ ಎಂಥದ್ದು ಅಂತೆಲ್ಲಾ ನಿರ್ಣಯಿಸಿ ಬಿಡಬಹುದು. ನಮಗಿರುವ ಜ್ಞಾನದ (?) ಆಳ ವಿಸ್ತಾರಗಳೆಷ್ಟು ಅಂತ ಅಳೆದುಬಿಡಬಹುದು. …

    ಪೂರ್ತಿ ಓದಿ...
  • ವಿಶ್ವನಂದಿನಿ ಲೇಖನ ಮಾಲೆ – 001

  • Durga Devi

    ಮಹಿಷಾಸುರ ಮರ್ದಿನಿ ದುರ್ಗಾದೇವಿ

    ನವರಾತ್ರಿಯ ಮೊದಲನೆ ದಿನ ದುರ್ಗಾದೇವಿ ಅಥವಾ ಮಹಾಕಾಳಿಯ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಮತ್ತು ಒಂಬತ್ತು ದಿವಸ ದೇವಿಯ ಉತ್ಸವವನ್ನು ಆಚರಿಸಲಾಗುತ್ತದೆ. ನಾವು ಇಂದು ದುರ್ಗಾದೇವಿಯು ಮಹಿಷಾಸುರ ಮರ್ದಿನಿ ಹೇಗೆ ಆದಳು ಎಂಬುದನ್ನು ತಿಳಿಯೋಣ. ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ …

    ಪೂರ್ತಿ ಓದಿ...
  • sister

    3 ಸಹೋದರರು ಹಾಗೂ ಒಂದು ಸಹೋದರಿ

  • ಅಲೆಮಾರಿಗಳ ‘ಬುಡ್ಗನಾದ’

    ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …

    ಪೂರ್ತಿ ಓದಿ...
  • ಕೋಳಿ ಅಂಕ

    ಕೋಳಿ ಅಂಕ

  • kolata

    ಕೋಲಾಟ

  • nambikegalu

    ಜನಪದ ನಂಬಿಕೆಗಳು

  • marriage

    ಮದುವೆ ಮನೆಯಲ್ಲಿ ಜರೆಯುವ ಹಾಡು

  • Kumaravyasa

    ಕುಮಾರವ್ಯಾಸ

    ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …

    ಪೂರ್ತಿ ಓದಿ...
  • ಕನ್ನಡ ಕವಿಗಳ ಕಾವ್ಯ ಕಲ್ಪನೆ

  • ಭರತೇಶ ವೈಭವ

  • ರತ್ನಾಕರ ವರ್ಣಿ

  • ಪಂಪ

  • Master Hiranayya

    ಮಾಸ್ಟರ್ ಹಿರಣ್ಣಯ್ಯ

    ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …

    ಪೂರ್ತಿ ಓದಿ...
  • ಮರಿಯಪ್ಪ ನಾಟೇಕರ್

  • ಮಂಡ್ಯ ರಮೇಶ್

  • ಬಿ.ಜಯಮ್ಮ

  • ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

  • yamuna murthy

    ಯಮುನಾ ಮೂರ್ತಿ

    ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …

    ಪೂರ್ತಿ ಓದಿ...
  • pratibha prahlad

    ಪ್ರತಿಭಾ ಪ್ರಹ್ಲಾದ್

  • udayashankar

    ಮಹಾನ್ ನೃತ್ಯ ಕಲಾವಿದ ಉದಯಶಂಕರ್

  • sahana

    ಸಹನಾ ಚೇತನ್

  • yamini

    ಯಾಮಿನಿ ಕೃಷ್ಣಮೂರ್ತಿ

ಸೊಬಗು: ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ನಮ್ಮ ತಾಣ (ನಮ್ಮ ಕನ್ನಡ ನಾಡು) ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ, ಜನಪದಬಲ ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Google+ Publisher