ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …
ಪೂರ್ತಿ ಓದಿ...ಕೋಳಿ ಅಂಕ
ಕೋಳಿ ಅಂಕ ಕೋಳಿಗಳ ಕಾದಾಟದ ಆಟ. ಎರಡು ಬಲಿತ, ಬಲಿಷ್ಠ ಹುಂಜಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ(ಬಾಲು)ಗಳನ್ನು ಕಟ್ಟಿ ಅವುಗಳನ್ನು ಹೋರಾಟಕ್ಕೆ ಬಿಡುವರು. ಹುಂಜಗಳು ಪರಸ್ಪರ ಕಾದಾಡುವಾಗ ಯಾವ ಹುಂಜವುೆದುರಾಳಿಯನ್ನು ಗಾಯಗೊಳಿಸಿ ಹೈರಾಣಾಗಿಸುವುದೋ ಆ ಹುಂಜವು ವಿಜಯಿಯಾದಂತೆ. ಅದರ ಯಜಮಾನನಿಗೆ ಬಹುಮಾನ ಸಲ್ಲುವುದು. ಅಂತೆಯೇ ಕೋಳಿ ಅಂಕದಲ್ಲಿ ಗೆಲ್ಲಲೆಂದು ಮುತುವರ್ಜಿವಹಿಸಿ ಕೋಳಿ ಸಾಕುವುದೂ ಸಹಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆಟವು ಕೋಳಿ ಕಟ್ಟ ಎಂದು ಪ್ರಸಿದ್ಧಿ. ಕಂಬಳದಂತೆಯೇ ಕೋಳಿ ಕಟ್ಟವೂ ಸ್ಥಳೀಯರಲ್ಲಿ ಜನಪ್ರಿಯ. ಗೆಲ್ಲಬಹುದಾದ ಕೋಳಿಯ ಮೇಲೆ ಬಾಜಿ ಕಟ್ಟುವುದರಿಂದ ಇದನ್ನು ಜೂಜಾಟ …
ಪೂರ್ತಿ ಓದಿ...ಕೋಲಾಟ
ಕೋಲಾಟ ಒಂದು ಗಂಡು ಕಲೆ, (ಹೆಣ್ಣು ಮಕ್ಕಳು ಕೋಲಾಡುವುದು ಅಪರೂಪ). ಹಾಡು ಮತ್ತು ಕುಣಿತವು ಬೆರೆತಿರುವಂತಹ ಕಲೆಯಾಗಿರುವುದು. ಗೋಕುಲದಲ್ಲಿ ಶ್ರೀ ಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ತಮ್ಮ ಸಂತೋಷವನ್ನು ವ್ತಕ್ತಪಡಿಸಿದುದು ಮತ್ತು ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟದ ಪ್ರಾಚೀನವಾದ ಕಲೆಯನ್ನು ತಿಳಿಸುತ್ತದೆ. ಕೋಲು ತರುವ ಮತ್ತ್ತು ಬಿಡುವ ಆಚರಣೆ ಗ್ರಾಮದ ಹಬ್ಬಗಳಲ್ಲಿ ಮೊದಲು ಕೋಲು ತರುವ ಮತ್ತು ಹಬ್ಬದ ನಂತರ ಕೋಲು ಬಿಡುವ ಆಚರಣೆಗಳಿವೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಆಚರಣೆ ಹೀಗಿದೆ. ನವರಾತ್ರಿ ಆರಂಭವಾಗುವ ಮೊದಲು …
ಪೂರ್ತಿ ಓದಿ...ಜನಪದ ನಂಬಿಕೆಗಳು
ಜನಪದ ನಂಬಿಕೆಗಳು ಜನಜೀವನದಲ್ಲಿ ನಡೆದಾಡುವ ನಾಣ್ಯಗಳಿದ್ದಂತೆ. ಅವು ಜನತೆಯ ಜೀವನಾನುಭವದ ಮೂಸೆಯಿಂದ ಮೂಡಿ ಬಂದು, ಬದುಕಿನಲ್ಲಿ ಬೆರೆತು ಪರಿಣಾಮಕಾರಿಯಾಗಿ ಪ್ರಭಾವಬೀರಿ ಜೀವಂತವಾಗಿವೆ. ಜನತಾಭಾವದ ಅಭಿವ್ಯಕ್ತಿಗಳಾದ ಜನಪದ ನಂಬಿಕೆಗಳು, ಜನತೆಯ ಪರಂಪರಾಗತ ಜ್ಞಾನಸುಧೆ, ಸುಸಂಸ್ಕೃತ ಹೃದಯದ ಪರಿಪಕ್ವ ಅನುಭವದ ಸಾರವೆಂದು ಹೇಳಬಹುದು. ಹೀಗಾಗಿ ಇವು ಜನಜೀವನದಲ್ಲಿ ಹಾಸುಹೊಕ್ಕಾಗಿ ಸೆರಿ, ಅವರ ಬದುಕನ್ನೇ ನಿಯಂತ್ರಿಸಿ ನಿರ್ದೇಶಿಸುವ ಪ್ರಮುಖ ಶಕ್ತಿಯಾಗಿ ಪರಿಣಾಮಿಸಿ, ಜನಪದ ಬದುಕಿಗೆ ವಜ್ರಕವಚವಾಗಿದೆ. ಈ ಹಿನ್ನೆಲೆಯಲ್ಲಿ ಜನಪದ ನಂಬಿಕೆಗಳ ಒಂದು ಪ್ರಮುಖ ಅಂಗವಾದ ‘ಮಾನವ ಸಂಬಂಧಿ ನಂಬಿಕೆ’ ಗಳನ್ನು ಕುರಿತು ಇನ್ನು ನೋಡಬಹುದು. ಸಮಾಜಶಾಸ್ತ್ರ, ಮಾನವಶಾಸ್ತ್ರ, …
ಪೂರ್ತಿ ಓದಿ...ಮದುವೆ ಮನೆಯಲ್ಲಿ ಜರೆಯುವ ಹಾಡು
ಹವ್ಯಕರ ಮದುವೆ ಮನೆಯಲ್ಲಿ ಬಹಳ ಹಿಂದೆ ಜರೆಯುವ ಹಾಡು ಹೇಳುವ ಪದ್ಧತಿ ಇತ್ತು. ಈಗ ಮದುವೆಯಲ್ಲಿ ಯಾವ ಹಾಡನ್ನು ಹೇಳುವುದೂ ಅಪರೂಪವಾಗಿದೆ. ಹಾಡಿನ ಮೂಲಕ ನೆಂಟರು ಒಬ್ಬರನ್ನೊಬ್ಬರು ಜರೆಯುವುದು ಆಕ್ಷೇಪಕ್ಕೆಂದಲ್ಲ. ಅದು ಒಂದು ಖುಷಿಗಾಗಿ ಅಷ್ಟೆ. ಇದಕ್ಕೆ “joking relationship” ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಹೊಸ ಬಾಂಧವ್ಯ ನಿಕಟವಾಗುತ್ತದೆಯೆಂದು ಭಾವಿಸಲಾಗುತ್ತದೆ. ಹವ್ಯಕರಲ್ಲಿ ಮದುವೆ ಕಾರ್ಯಕ್ರಮದ ವಿಧಿಗಳಲ್ಲಿ ಮಂತ್ರಗಳು ಹೇಗಿವೆಯೋ ಹಾಗೆ ಪ್ರತಿಯೊಂದು ವಿಧಿಗೂ ಪ್ರತ್ಯೇಕ ಮತ್ತು ವೈವಿಧ್ಯವಾದ ಹಾಡುಗಳಿವೆ. ಹವ್ಯಕರ ಮದುವೆ ಮನೆಯಲ್ಲಿ ಜರೆಯುವ ಹಾಡು ಗಂಡಿನ ಕಡೆಯವರು: ಕಲ್ಯಾಣವೇ ಕಪ್ಪಿನ ಕಲ್ಯಾಣವೇ …
ಪೂರ್ತಿ ಓದಿ...ಖೊಖೊ | Kho Kho
ಬೆನ್ನು ಹತ್ತಿಹೋಗಿ ಮುಟ್ಟಿಸುವ ಆಟ (ಖೊಖೊ). ಇದರಲ್ಲಿ ಒ೦ದು ತ೦ಡದಲ್ಲಿ 12 ಜನ ಆಟಗಾರರಿದ್ದು ಅದರಲ್ಲಿ 9 ಜನ ಆಟಗಾರರು ಆಟದಲ್ಲಿರುತ್ತಾರೆ. ಒ೦ದು ತ೦ಡದವರು ಮತ್ತೊ೦ದು ತ೦ಡದವರನ್ನು ಮುಟ್ಟಿಸಲು ಪ್ರಯತ್ನಿಸುತ್ತಾರೆ. ವಿರೋದಿ ತ೦ಡದವರಿ೦ದ ಅವರು ತಪ್ಪಿಸಿಕೊಳ್ಳುಲು ಪ್ರಯತ್ನಿಸುತ್ತಾರೆ. ಕಬಡ್ಡಿ ಆಟವನ್ನು ಹೊರತು ಪಡಿಸಿದರೆ ದಕ್ಷಿಣ ಏಷ್ಯಾದಲ್ಲೆ ಇದೊ೦ದು ಜನಪ್ರಿಯ ಸಾ೦ಪ್ರದಾಯಕ ಬೆನ್ನು ಹತ್ತಿಹೋಗುವ ಆಟ. ದಕ್ಷಿಣ ಏಷ್ಯಾ ದಲ್ಲೇ ಅಲ್ಲದೆ (ಮುಖ್ಯವಾಗಿ ಭಾರತ ಪಾಕೀಸ್ತಾನ)ಈ ಆಟವನ್ನು ದಕ್ಷಿಣ ಆಫ್ರಿಕಾದಲ್ಲೂ ಆಡುತ್ತಾರೆ. ಆಟದ ನಿಯಮಗಳು ಪ್ರತಿ ತ೦ಡದಲ್ಲೂ 12 ಜನ ಆಟಗಾರರಿರುತ್ತ್ತಾರೆ, 9 ಜನ ಆಟದಲ್ಲಿರುತ್ತಾರೆ. …
ಪೂರ್ತಿ ಓದಿ...ಹಿತಾರು – ಬುಡಕಟ್ಟು ನಡೆನುಡಿಯ ಕುರುಹು
ಹಿರಿಯರುಗಳೇ ನಮ್ಮ ದೇವರುಗಳು ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಬಂದಿದೆ. ಈ ನಂಬಿಕೆಗೆ ಕನ್ನಡಿ ಹಿಡಿದಂತೆ ನಮ್ಮ ನಡೆ-ನುಡಿಗಳಿರುವುದನ್ನು ಗಮನಿಸಬಹುದು. ಇಂತಹ ನಡೆ-ನುಡಿಗಳಲ್ಲಿ ಒಂದು ‘ಹಿತಾರು’. ನಾನು ಗಮನಿಸಿದಂತೆ ಮಲೆನಾಡಿನ ಹೆಚ್ಚಿನ ಮನೆಗಳಲ್ಲಿ ಹಿರಿಯನ್ನು ಪೂಜಿಸುವ ಪದ್ದತಿಯೇ ಹಿತಾರು. ಸಾಮಾನ್ಯವಾಗಿ ಹಿತಾರು ಎಂಬುದು ಕಂಚು ಇಲ್ಲವೇ ತಾಮ್ರದ ಎರೆಡು ಗಿಂಡಿಗಳಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಹೂವು, ಅರಿಶಿನ-ಕುಂಕುಮಗಳಿಂದ ಸಿಂಗಾರಗೊಳಿಸಿ, ಹಿತಾರು ಪೂಜೆಗೆಂದೇ ಮನೆಯಲ್ಲಿ ನಿಗದಿ ಮಾಡಿರುವ ಜಾಗದಲ್ಲಿಟ್ಟು ಪೂಜಿಸುವುದು. ಆ ಕುಟುಂಬದಲ್ಲಿ ಬಾಳಿ-ಬದುಕಿ ತೀರಿಹೋಗಿರುವ ಎಲ್ಲಾ ಹಿರಿಯರು ಆ ಹಿತಾರಿನಲ್ಲಿ ಇರುತ್ತಾರೆ ಎಂಬುದು ನಂಬಿಕೆ. …
ಪೂರ್ತಿ ಓದಿ...ತುಳುನಾಡಿನ ಬನದ ‘ಮೂರಿಲೆ ಕುದ್ಪೆ’
ಕರುನಾಡಿನ ಕರಾವಳಿಯ ಚಿಕ್ಕ ಪ್ರದೇಶ ತುಳುನಾಡು. ಇಲ್ಲಿಯ ಆಚರಣೆಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದನ್ನು ನಾವು ಸೂಕ್ಷ್ಮವಾಗಿ ಹುಡುಕುತ್ತಾ ಹೋದಾಗ ನಮಗೆ ತೆರೆದುಕೊಳ್ಳುವ ಮಜಲುಗಳು ಅನೇಕ. ಪ್ರತಿಯೊಂದು ಆಚರಣೆಯು ತನ್ನದೇ ಆದ ಪ್ರಾಮುಖ್ಯತೆವನ್ನು ಎತ್ತಿ ಹಿಡಿಯುತ್ತದೆ. ಇಲ್ಲಿ ಬರುವ ಆಚರಣೆಗಳು ಮಾನವನ ಪ್ರಾಮುಖ್ಯವನ್ನು ತೋರಿಸುತ್ತದೆ. ಕೆಲವು ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ, ಮನೆತನದಿಂದ ಮನೆತನಕ್ಕೆ ಭಿನ್ನವಾಗಿ ಕಂಡು ಬರುವುದು ತುಳುನಾಡಿನ ವಿಶೇಷತೆ. ಇಂದಿನ ಗ್ರಾಮೀಣ ಜೀವನಕ್ಕೆ ನಗರ ಬದುಕಿನ ಪ್ರಭಾವದಲ್ಲಿಯು ತುಳುನಾಡಿನ ಆಚರಣೆಗಳು ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿರುವುದು ಇಲ್ಲಿನ ಜನರ ನಂಬಿಕೆ ಮತ್ತು ಭಕ್ತಿಗೆ …
ಪೂರ್ತಿ ಓದಿ...ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ
ಪೌರಾಣಿಕ ಕಥೆಯನ್ನು ಆಧಾರಿಸಿದ ಈ ವೀರಗಾಸೆ ಕುಣಿತವು ದಕ್ಷಬ್ರಹ್ಮ ಮತ್ತು ಈಶ್ವರನಿಗೆ ಸೇರಿದ ಒಂದು ಸುಂದರ ಕತನವಾಗಿದೆ. ಒಮ್ಮೆ ದಕ್ಷಬ್ರಹ್ಮನೂ ಒಂದು ಯಜ್ಞವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಾಗ ತನ್ನ ಮಗಳನ್ನು ಮತ್ತು ಅಳಿಯನನ್ನು ಕರೆಯುವುದಿಲ್ಲದಿರುವಾಗ ನಡೆಯುವ ಒಂದು ಘಟನಾವಾಳಿಯ ಚಿತ್ರಣ. ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ …
ಪೂರ್ತಿ ಓದಿ...ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ
ಭಾರತೀಯ ನಾರಿ ಅಂದಾಕ್ಷಣ, ನೆನಪಿಗೆ ಬರುವವಳೇ ಸೀರೆಯುಟ್ಟ ನಾರಿ. ನಮ್ಮ ದೇಶೀಯ ಸಂಸ್ಕೃತಿಯ ಜೀವಾಳವೇ ಸೀರೆ. ನೀರೆಯ ಅಂದದ ಉಡುಪಾದ ಸೀರೆಗೆ ಅದರದ್ದೇ ಆದ ಗೌರವಗಳಿವೆ. ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆಗೆ ಮತ್ತು ಸೀರೆಯುಡುವ ಶೈಲಿಗೆ ವಿದೇಶಿಯರೂ ಮನಸೋತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆ. ಸೀರೆಯ ಬಳಕೆ ಎಲ್ಲಿಂದ ಪ್ರಾರಂಭವಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲ. ಆದರೆ, ಕ್ರಿಸ್ತ ಪೂರ್ವ 2000 …
ಪೂರ್ತಿ ಓದಿ...