ಒಂದು ಊರಿನಲ್ಲಿ ಒಂದು ಕಾಡು ಆ ಕಾಡಿನಲ್ಲಿ ಹಲವು ಪ್ರಾಣಿಗಳಿದ್ದವು. ಆ ಕಾಡಿಗೆ ಬರ ಬಂದಿತು
ಆಮೆ: ಹೇಗೆ ಇತ್ತು ನಮ್ಮ ಕಾಡು. ಹೇಗೆ ಆಗಿ ಹೋಯಿತು. ಮಳೆ ಮುಖ ಕಂಡು ವರ್ಷದ ಮೇಲೆ ಆರು ತಿಂಗಳೇ ಆಯ್ತಲ್ಲ.
ಚಿರತೆ: ನನ್ನ ಅಪ್ಪ ಹೇಳುತಿದ್ದರು. ಆ ನೇರಳೆ ಮರದ ಮುಂದೆ ನಿಂತಿಕೊಂಡು ಅದು ಯಾವುದೋ ಮಂತ್ರ ಹೇಳಿದರೆ ಅದು ಈ ಕಾಡಿನಲ್ಲಿರುವ ಪ್ರಾಣಿಗಳಿಗೆಲ್ಲ ಬೇಕಾಗುವಷ್ಟು ಆಹಾರ ಕೊಡುವುದಂತೆ. (ಆಗ ಮೊಲ ಮೆಲ್ಲನೆ ಪುಟಿಯುತ್ತಾ ಬಂದಿತು)
ಮೊಲ:ಹೌದಾ!
ಆಮೆ: ನೀನು ಯಾವಾಗ ಬಂದೆ.
ಮೊಲ:ನಾನು ನೀವು ಮಾತನಾಡುವಾಗಲೆ ಬಂದೆ.
ಚಿರತೆ: ಆ ಮಂತ್ರ ಆ ಬೆಟ್ಟಕ್ಕೆ ಮಾತ್ರ ಗೊತ್ತು.(ಎಂದು ಕೈ ಚಾಚಿ ತೋರಿಸಿ ಹೇಳಿತು )
ಮೊಲ:ಹೌದಾ!
ಮೊಲ:ಹಾಗಾದರೆ ನಾವು ಅಲ್ಲಿಗೆ ನಾವು ಹೋಗೋಣ(ಇದನ್ನು ಎಲ್ಲರಿಗೂ ಹೇಳಿತು)
ಎಲ್ಲಾ ಪ್ರಾಣಿಗಳು: ಚಿರತೆ ಎಲ್ಲರಿಗಿಂತ ವೇಗ ಚಿರತೆಯನ್ನೆ ಕಳಿಸೋಣ.
ಚಿರತೆ: ಆಯಿತು ನಾನೆ ಹೋಗುತ್ತೇನೇ.(ಅದು ಬೆಟ್ಟದ ಹತ್ತಿರಾ ಹೋಗಿ)
ಚಿರತೆ: ಬೆಟ್ಟ ಬೆಟ್ಟ ನಮ್ಮ ಕಾಡಿಗೆ ಬರ . ಅದಕ್ಕಾಗಿ ಆ ನೇರಳೆ ಮರದ ಮುಂದೆ ನಿಂತುಕೊಂಡು ಹೇಳಬೇಕಾಗಿರುವ ಮಂತ್ರ ಹೇಳು ಅದರಿಂದ ನಮಗೆಲ್ಲರಿಗೂ ಊಟ ಸಿಗುವುದು, ಅದಕ್ಕಾಗಿ ನೀನು ಆ ಮಂತ್ರ ಹೇಳು.
ಬೆಟ್ಟ: ನಾನು ಹೇಳುವುದ್ದಿಲ್ಲ.
ಚಿರತೆ:ದಯವಿಟ್ಟು. ಹೇಳು
ಬೆಟ್ಟ:ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪಾರಳ್ಳಿ ತಿಪ್ಪ, ದೋಸೆ ಮೇಲೆ ತುಪ್ಪ, ಭೂಮಿಗೆಲ್ಲ ಬೆಪ್ಪ, ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
(ಚಿರತೆ ಮತ್ತೇ ಕಾಡಿಗೆ ಬರುವಾಗ ಕಲ್ಲಿಗೆ ಕಾಲು ಎಡವಿ ಬಿದ್ದು ಆ ಮಂತ್ರ ಮರೆತು ಹೋಯಿತು)
ಎಲ್ಲಾ ಪ್ರಾಣಿಗಳು: ಚಿರತೆ ಹೇಳು ಆ ಮಂತ್ರ ಹೇಳು
ಚಿರತೆ: ನನಗೆ ಆ ಮಂತ್ರ ಮರೆತು ಹೋಯಿತು
ಎಲ್ಲಾ ಪ್ರಾಣಿಗಳು: ಏನುನಿನಗೆ ಆ ಮಂತ್ರ ಮರೆತು ಹೋಯಿತೆ
ಎಲ್ಲಾ ಪ್ರಾಣಿಗಳು: ಈಗ ನಾವು ಮೊಲವನ್ನು ಕಳಿಸಬೇಕು
ಮೊಲ: ಆಯಿತು ನಾನು ಅಲ್ಲಿಗೆ ಹೋಗುತ್ತೇನೆ.
ಮೊಲ: ಬೆಟ್ಟ ಬೆಟ್ಟ ಚಿರತೆ ಆ ಮಂತ್ರವನ್ನು ಮರೆತು ಹೋಯಿತು ಅದ್ದಕ್ಕಾಗಿ ಆ ಮಂತ್ರವನ್ನು ಮತ್ತೊಮ್ಮೆ ಹೇಳು
ಬೆಟ್ಟ: ನಾನು ಹೇಳುವುದ್ದಿಲ್ಲ.
ಮೊಲ:ದಯವಿಟ್ಟು. ಹೇಳು
ಬೆಟ್ಟ: ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪಾರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ
ಸಂಪಂಗಪ್ಪ”
(ಮೊಲ ಮತ್ತೇ ಕಾಡಿಗೆ ಬರುವಾಗ ಕಲ್ಲಿಗೆ ಕಾಲು ಎಡವಿ ಬಿದ್ದು ಆ ಮಂತ್ರ ಮರೆತು ಹೋಯಿತು)
ಎಲ್ಲಾ ಪ್ರಾಣಿಗಳು:ಮೊಲ ಹೇಳು ಆ ಮಂತ್ರ ಹೇಳು
ಮೊಲ: ನನಗೆ ಆ ಮಂತ್ರ ಮರೆತು ಹೋಯಿತು
ಎಲ್ಲಾ ಪ್ರಾಣಿಗಳು: ಈಗ ನಾವು ಯಾರನ್ನು ಕಳಿಸುವುದು
ಆಮೆ: ನಾನು ಹೋಗುತ್ತೇನೇ
ಎಲ್ಲಾ ಪ್ರಾಣಿಗಳು: ನೀನು ಹೋದರೆ ಒಂದು ತಿಂಗಳುಆಗುವುದು
ಆಮೆ:ಆದರೇನಂತೆ ನಾನು ಚಿರತೆ ಮತ್ತು ಮೊಲದಂತಲ್ಲ.
ಎಲ್ಲಾ ಪ್ರಾಣಿಗಳು: ಆಯಿತು ನೀನೇ ಹೋಗಿ ಬಾ ಆದರೆ ಆ ಮಂತ್ರವನ್ನು ಮಾತ್ರ ಚಿರತೆ ಮತ್ತು ಮೊಲ ತರಹ ಮರೆಯ ಬೇಡ .
ಆಮೆ:(೧೫ ದಿನಗಳ ನಂತರ) ಬೆಟ್ಟ ಬೆಟ್ಟ ಮೊಲ ಆ ಮಂತ್ರವನ್ನು ಮರೆತು ಹೋಯಿತು ಅದ್ದಕ್ಕಾಗಿ ಆ ಮಂತ್ರವನ್ನು ಮತ್ತೊಮ್ಮೆ ಹೇಳು
ಬೆಟ್ಟ: ನಾನು ಹೇಳುವುದಿಲ.
ಆಮೆ:ದಯವಿಟ್ಟು. ಹೇಳು
ಬೆಟ್ಟ: ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
ಎಲ್ಲಾ ಪ್ರಣಿಗಳು:(೧೫ ದಿನಗಳ ನಂತರ) ಆಮೆ ಹೇಳು ಆ ಮಂತ್ರ ಹೇಳು
ಆಮೆ: ಕೇಳಿ ಆ ಮಂತ್ರವನ್ನು ಹೇಳುತ್ತೇನೆ “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ” ಈದೇ ಆ ಮಂತ್ರ
ಚಿರತೆ: ಆಯಿತು ಆ ಮಂತ್ರವನ್ನು ಆ ನೆರಳೆ ಮರದ ಮುಂದೆ ಹೇಳೋಣ ಬನ್ನಿ ಎಲ್ಲಾ ಪ್ರಣಿಗಳು (ನೆರಳೆ ಮರದ ಮುಂದೆ ನಿಂತು) “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”
(ಆ ಕ್ಷಣವೇ ಆ ಕಾಡಿಗೆ ಮಳೆ ಬಂದಿತು)
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.