ಒಂದು ಊರಿನಲ್ಲಿ ಕಿಶೋರ, ಕಿರಣ ಮತ್ತು ಕೀರ್ತಿ ಎಂಬ ಮೂರು ಜನ ಆತ್ಮೀಯ ಸ್ನೇಹಿತರಿದ್ದರು. ಆ ಮೂರು ಜನ ಸಹ ಸದಾ ಜೊತೆಯಲ್ಲೇ ಇರುತ್ತಿದ್ದರು. ಆಟ, ಪಾಠ, ಶಾಲೆ, ಓದುವುದರಲ್ಲೂ ಸಹ ಒಟ್ಟಿಗೆ ಇರುತ್ತಿದ್ದರು. ಒಬ್ಬರನೊಬ್ಬರು ಬಿಟ್ಟು ಯಾರು ಇರುತ್ತಿರಲಿಲ್ಲ ಈಥರ ಇರಬೇಕಾದರೆ ಒಮ್ಮೆ ಶಾಲೆಯಲ್ಲಿ ಕಿಶೋರನ ಪೆನ್ನು ಕಳುವಾಯಿತು. ಅದು ಕಿಶೋರಗೆ ಬಹಳ ಅಚ್ಚುಮೆಚ್ಚಿನದಾಗಿತ್ತು. ಯಾಕೆಂದರೆ ಅದನ್ನು ಕಿಶೋರನ ಅಮ್ಮ ಅವನ ಹುಟ್ಟುಹಬ್ಬದಂದು ಅವನಿಗೆ ಉಡುಗರೆಯಾಗಿ ನೀಡಿದ್ದಳು.
ಆ ಪೆನ್ನು ನೋಡುವುದಕ್ಕೆ ತುಂಬಾ ಸುಂದರವಾಗಿರುವುದರಿಂದ ಕಿರಣಗೂ ಆಸೆಯಾಗಿತ್ತು. ಅವನು ಹಿಂದೆ ಒಂದು ದಿನ ಇಥರ ಪೆನ್ನನ್ನು ನಾನು ತೆಗೆದುಕೊಳ್ಳುತ್ತೀನಿ ನೋಡು ಎಂದು ಹೇಳಿದ್ದ. ಆದ್ದರಿಂದ ಕಿಶೋರಗೆ ಅನುಮಾನ ಮೊದಲು ಕಿರಣನ ಮೇಲೆ ಹೋಗಿತು. ಅದರಂತೆ, “ನನ್ನ ಪೆನ್ನನ್ನು ತೆಗೆದುಕೊಂಡಿದ್ದರೆ ದಯವಿಟ್ಟು ಕೊಟ್ಟುಬಿಡು” ಎಂದನು. ಕಿರಣ ನಿಜವಾಗಿಯೂ ನನ್ನ ಎತ್ತಿಕೊಂಡಿಲ್ಲ ಎಂದನು. ‘ಸುಳ್ಳು ಹೇಳಬೇಡ, ಅದರ ಮೇಲೆ ನಿನಗೆ ಕಣ್ಣಿತ್ತು’ ನನಗೆ ಗೊತ್ತು ಎಂದನು. ಆದರೆ ಇದರಿಂದ ಅನುಮಾನಿತನಾಗಿ ಕುಪಿತಗೊಂಡ ಕಿರಣ ಜಗಳವಾಡಲು ಮುಂದಾದನು. ಕೊನೆಗೆ “ಛೀ” ದ್ರೋಹಿ ನಿನ್ನ ಸ್ನೇಹಿತನ ಮೇಲೆ ನೀನು ಸಂಶಯ ಪಡುತ್ತಿಯೇ, ಇನ್ಮೊಂದೆ ನನ್ನೊಂದಿಗೆ ನೀನು ಮಾತನಾಡಬೇಡ ಅಂತ ಹೇಳಿ ಹೊರಟು ಹೋದ. ಪೆನ್ನು ಕಳೆದುಕೊಂಡ ದುಃಖದಲ್ಲಿ ಕಿಶೋರ ಸಹ ನಾನು ಅಷ್ಟೇ ನಿನ್ನ ಜೊತೆ ಮಾತನಾಡುವುದಿಲ್ಲ ಹೋಗು ಎಂದ.
[sociallocker]ಅಂದಿನಿಂದ ಅವರಿಬ್ಬರಿಗೆ ಸಹ ಒಬ್ಬರನೊಬ್ಬರು ನೋಡುತ್ತ ಇದ್ರೆ ಅವರಿಗೆ ಆಗ್ತ ಇರಲಿಲ್ಲ. ಆದರೆ ಇದರಿಂದ ಕೀರ್ತಿಗೆ ತೊಂದರೆಯಾಗುತ್ತಿತ್ತು. ಏಕೆಂದರೆ ಅವನ ಜೊತೆ ಮಾತನಾಡಿದರೆ ಇವನಿಗೆ ಕೋಪಬರುತ್ತಿತ್ತು, ಇವನ ಜೊತೆ ಮಾತನಾಡಿದರೆ ಅವನಿಗೆ ಕೋಪಬರುತ್ತಿತ್ತು.
ಒಂದು ದಿನ ಕಿಶೋರನ ಪಕ್ಕದಲ್ಲಿ ಹಾವು ಇದ್ದಿದ್ದನ್ನು ಕೀರ್ತಿ ಗಮನಿಸಿದ ಆಗ ಒಂದು ಕೋಲನ್ನು ಎಳೆದುಕೊಂಡು ಕಿರಣ್ ಕಡೆ ಎಸೆದನು. ಅಷ್ಟರಲ್ಲಿ ಹಾವು ಸುಮ್ಮನೆ ಮಲಗಿದಿದ್ದನ್ನು ಕಂಡು ಧೈರ್ಯ ತೆಗೆದುಕೊಂಡು ಕಿಶೋರ ಹಾಗೂ ಕಿರಣ ಅದನ್ನು ಬಡಿಯಲು ಆರಂಭಿಸಿದರು. ಆದರೆ ಕೀರ್ತಿ ಮಾತ್ರ ಮನದಲ್ಲಿ ನಗುತ್ತಿದ್ದ. ಏಕೆಂದರೆ ಅವರಿಬ್ಬರನ್ನು ಒಂದುಗೂಡಿಸಲು ಅವನು ಸತ್ತ ಹಾವನ್ನು ಅಲ್ಲಿ ಎಸೆದಿದ್ದ. ನಂತರ. “ಸಾಕು ಬಿಡಿ ಅದು ಸತ್ತಿದೆ.” ಎಂದು ಸಮಾಧಾನಿಸುತ್ತಾ’ ನೋಡಿದ್ಯಾ ಕಿಶೋರ, ಇಂದು ಕಿರಣ ಇಲ್ಲದಿದ್ದರೆ ನಿನ್ನ ಗತಿ ಏನಾಗುತ್ತಿತ್ತು? ಸ್ವಲ್ಪ ಯೋಚನೆ ಮಾಡು ಎಂದು ಹೇಳಿದ. ಅನಂತರ ಅವನು ಇಲ್ಲದಿದ್ದರೂ ಏನು ಆಗುತ್ತಿರಲಿಲ್ಲ” ಎಂದನು. ಇದರಿಂದ ಕುಪಿತಗೊಂಡ ಕಿರಣ, ಹಾವನ್ನು ಹೊಡೆದವನು ನಾನು, ನಾನು ಸರಿಯಾಗಿ ತಲೆಯಮೇಲೆ ಹೊಡೆದಿದ್ದರಿಂದಲೇ ಅದು ಸತ್ತಿರೋದು” ಎಂದು ಮತ್ತೆ ಜಗಳವಾಡಲು ಪ್ರಾರಂಭಿಸಿದರು. ಆದರೆ ಸತ್ತ ಹಾವನ್ನು ಹೊಡೆದು ಹೀಗೆ ರೋಷದಿಂದ ಮಾತನಾಡುತ್ತಿರುವ ಸ್ನೇಹಿತನನ್ನು ನೋಡಿ ಕೀರ್ತಿಗೂ ನಗು ಬಂತು. ಮತ್ತೊಂದಡೆ ನಾನು ಮಾಡಿದ ಉಪಾಯದಿಂದಲೇ ಮತ್ತೆ ಇವರು ಜಗಳವಾಡುತ್ತಿರುವರಲ್ಲ ಎಂದು ಬೇಸರವೂ ಆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಕೀರ್ತಿ ಅವರಿಬ್ಬರನ್ನು ಸಮಾಧಾನ ಮಾಡಿದ.
ಅನಂತರ ನಿಧಾನವಾಗಿ ಕಿಶೋರ ಚೇತರಿಸಿಕೊಂಡನು. ತಾನು ಮಾಡಿದ ತಪ್ಪಿನ ಅರಿವನ್ನು ತಿಳಿದುಕೊಂಡು “ನನ್ನನ್ನು ಕ್ಷಮಿಸು ಬಿಡು ಕಿರಣ ” ಎಂದನು. ಬಿಡು ಕಿಶೋರ, ಸ್ನೇಹದಲ್ಲಿ ಕ್ಷಮೆಗಳೆಲ್ಲ ಬೇಕಿಲ್ಲ. ಇದೆಲ್ಲ ಕೀರ್ತಿಗೆ ಸಲ್ಲಬೇಕು, ಅವನು ಬಂದು ನಿನಗೆ ಹುಷಾರಿಲ್ಲದಿರುವ ವಿಷಯ ನನಗೆ ತಿಳಿಸಿದ, ಈಗಲಾದರೂ ಅವನನ್ನು ಕಂಡು ಸ್ವಾಂತ್ವನ ಹೇಳು. ಇರುವಷ್ಟು ದಿನ ಒಳ್ಳೆಯ ಸ್ನೇಹಿತರಾಗಿ ಬಾಳೋಣ’ ಎಂದು ಬುದ್ಧಿ ಹೇಳಿದ. ಆಗ ಅವನು ನನಗೆ ಈಗ ಗೊತ್ತಾಯಿತು ಏನು ಸ್ನೇಹಿತ ಬೆಲೆ ಅಂತ ಎಂದುಕೊಂಡನು.
ತನ್ನ ಗೆಳೆಯ ಮಾಡಿಯ ಉಪಾಯ ಹಾಗೂ ಉಪಕಾರವನ್ನು ನೆನೆದು ಇಬ್ಬರ ಕಣ್ಣಲ್ಲೂ ಕಂಬನಿ ಮಿಡಿದು ಕೀರ್ತಿಯನ್ನು ತಬ್ಬಿಕೊಂಡರು. ಮೂರು ಜನ ಮತ್ತೆ ಮೊದಲಿನಂತೆ ಸ್ನೇಹದಿಂದ ಶಾಲೆಗೆ ಹೋಗತೊಡಗಿದರು. ಅವರು ಮತ್ತಿನ್ನೆಂದೂ ಜಗಳವಾಡದೆ ಒಂದಾಗಿ ಬಾಳಿದರು.
ನೀತಿ
ಸಂಬಂಧಗಳ ಮುಂದೆ ಯಾವ ವಸ್ತುವು ದೊಡ್ಡದಲ್ಲ.[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.