ಭೂತದ ಕಾಟ

ರಜೆಯ ಕಾಲ ಎಂದರೆ ಮಾಜದ ಕಾಲ ಎಂದೇ ಪುಟ್ಟಣ್ಣ ಮತ್ತು ಚಿಟ್ಟೆಯ ನಂಬಿಕೆ. ಶಾಲೆಗೆ ರಜೆ ಬಂತೆಂದರೆ ಸಾಕು ಹಳ್ಳಿಯಲ್ಲಿರುವ ಅಜ್ಜನ ಮನೆ ಅವರನ್ನು ಕರೆಯುತ್ತಿತ್ತು. ತೋಟ ಸುತ್ತವ ಕಾಡು ಹಣ್ಣುಗಳನ್ನು ಹೆಕ್ಕುವ, ತೊರೆಯ ನೀರಲ್ಲಿ ಮೀನಾಗಿ ಈಜುವ ಮಕ್ಕಳ ಕನಸು ರಜೆಯಲ್ಲಿ ಸಾಕಾರಗೊಳ್ಳುತ್ತಿತ್ತು.

ಎಂದಿನಂತೆ ಈ ಸಲವೂ ಅಜ್ಜನ ಮನೆ ಸೇರಿದ ಮಕ್ಕಳಿಗೆ ಊರಲ್ಲಿ ಕೇಳಿದ ಹೊಸ ಸುದ್ಧಿ ಹೆದರಿಕೆಯನ್ನು, ಕುತೂಹಲವನ್ನು ಹುಟ್ಟಿಸಿತ್ತು. ಅವರ ಮನೆಯಿಂದ ಒಂದೆರಡು ಫರ್ಲಾಂಗು ದೂರ ಇದ್ದ ಹುಲ್ಲಿನ ಛಾವಣಿಯ ಮನೆಯದು. ಹಗಲು ಹೊತ್ತಿನಲ್ಲಿ ಅಲ್ಲಿ ವಿಶೇಷವೇನೂ ಕಾಣದಿದ್ದರೂ ರಾತ್ರಿ ಹೊತ್ತು ಆ ಮನೆಯ ಮೇಲೆ ಆಗಸದಿಂದ ಕಲ್ಲುಗಳು ಬೀಳುತ್ತಿದ್ದವು. ಮನೆಯೊಳಗೆ ಮರಳು ಸುರಿಯುತ್ತಿತ್ತು. ಆ ಮನೆಯಲ್ಲಿ ವಾಸಿಸುತ್ತಿದ್ದುದು ಸೋಮ ಮತ್ತು ಅವನ ಮೊಮ್ಮಕ್ಕಳಾದ ವೇಣು ಮತ್ತು ದೀನು. ಅವರ ಅಪ್ಪ ಅಮ್ಮ ಕಳೆದ ಕೆಲವು ವರ್ಷಗಳ ಮೊದಲು ಅಪಘಾತದಲ್ಲಿ ತೀರಿ ಹೋಗಿದ್ದರು. ಊರವರೆಲ್ಲವು ಅವರೇ ಭೂತವಾಗಿ ಬಂದಿದ್ದಾರೆ ಎಂದು ಬಲವಾಗಿ ನಂಬಿದ್ದರು. ಮಕ್ಕಳ ಮೇಲೆ ಕರುಣೆ ತೋರಿ ಅವರಿಗೆ ಹಣದ ಸಹಾಯ ಮಾಡುತ್ತಿದ್ದರು. ಅನ್ನದ ಪಾತ್ರೆಗೆ ಮರಳು ಸುರಿಯುತ್ತದೆ ಎಂದು ಊರವರೇ ಊಟ ನೀಡುತ್ತಿದ್ದರು. ದಿನಾ ರಾತ್ರೆ ಅಲ್ಲಿ ಆ ವಿಶೇಷವನ್ನು ನೋಡಲು ಜನರ ಜಾತ್ರೆಯೇ ನೆರೆಯುತ್ತಿತ್ತು. ಕೆಲವೊಮ್ಮೆ ಅವರ ಮೇಲು ಕಲ್ಲುಗಳು ಬೀಳುತ್ತಿದ್ದವು.

[sociallocker]ಚಿಟ್ಟೆ ಮತ್ತು ಪುಟ್ಟಣ್ಣನಿಗೆ ಆ ಮನೆಯನ್ನು ನೋಡಬೇಕೆಂಬ ಆಸೆ ಹುಟ್ಟಿತು. ಅಜ್ಜ ಅಜ್ಜಿಗೆ ಹೇಳಿದರೆ ಬಿಡಲಾರರು ಎಂದು ಸೀಬೆ ಹಣ್ಣು ಕೊಯ್ಯುವ ನೆವಾವೊಡ್ಡಿ ಮನೆಯಿಂದ ಹೊರ ಬಿದ್ದು ಆ ಮನೆಯ ದಾರಿ ಹಿಡಿದಿದ್ದರು. ಇಬ್ಬರೂ ಮೆಲ್ಲನೆ ಆ ಮನೆಯ ಹಿಂಬಾಗಕ್ಕೆ ಬಂದರು. ಅಲ್ಲಿ ತಲಾ ಒಡೆದ ಕೆಲವು ಮಡಕೆಗಳು ಬಿದ್ದಿದ್ದವು. ಅದರ ಅತ್ತಿತ್ತ ಮೆನೆಗೆ ಬೀಳುತ್ತಿದ್ದ ಕಲ್ಲುಗಳು ಕೆಲವಿದ್ದವು.

ಪುಟ್ಟಣ್ಣ ಅಲ್ಲಿದ್ದ ಕಲ್ಲನ್ನು ನೋಡಿ ಚಿಟ್ಟೆ.. ಈ ಕಲ್ಲು ನಮ್ಮ ತೋಟದ ಮೊಲೆಯ ಹೊಳೆಯಲ್ಲಿ ಇರುವಂತಹ ಕಲ್ಲು ಅಲ್ವಾ.. ನೋಡು. ಮೊನ್ನೆ ನಾನು ನೀನು ಆತ ಆಡಲಿಕ್ಕೆ ಹೆಕ್ಕಿದಂತಹಾ ಕಲ್ಲುದುಚಿ ಎಂದ. ಚಿಟ್ಟೆ, ಆತೋಡಿನ ಕಡೆ ನೋಡಿ ಮನೆಗೆ ಹೋಗುವ ಎಂದಳು.

ತೊಡಿಗೆ ಇನ್ನೇನು ಇಳಿಯಬೇಕು ಅನ್ನುವಾಗ ಅಲ್ಲೆಲ್ಲೋ ಪಿಸು ಮಾತಿನ ಸದ್ದು ಕೇಳಿಸಿ ಇಬ್ಬರೂ ಮೌನವಾಗಿ ಮರೆಯಲ್ಲಿ ನಿಂತರು. ಕಲ್ಲುಗಳನ್ಣಾಯುತ್ತಿದ್ದವರನ್ನು ಕಂಡು ಪುಟ್ಟಣ್ಣ ಮತ್ತು ಚಿಟ್ಟೆಗೆ ಇದರಲ್ಲಿ ಏನೋ ಮೋಸವಿದೆ ಅನ್ನಿಸಿತು. ಮನೆಗೆ ಬಂದು ಅಜ್ಜನ ಹತ್ತಿರ ತಾವು ಕಂಡದ್ದನ್ನೆಲ್ಲಾ ಹೇಳಿದರು.

ಆ ದಿನ ರಾತ್ರಿ ಭೂತದ ಮನೆಗೆ ಹೊರಟವರಲ್ಲಿ ಊರವರ ಜೊತೆ ಅಜ್ಜನ ಕೈಹಿಡಿದು ಹೊರಟ ಪುಟ್ಟಣ್ಣ ಮತ್ತು ಚಿಟ್ಟೆಯೂ ಸೇರಿದ್ದರು. ಎಲ್ಲರೂ ಕಲ್ಲು ಬೀಳುತ್ತಿದ್ದ ಮನೆಯ ಎದುರು ಭಾಗದಲ್ಲಿ ಆ ಅಚ್ಚರಿಯನ್ನು ನೋಡಲು ನಿಂತಿದ್ದರು. ಮನೆಯ ಒಳಗೆ ಅಲ್ಲಲ್ಲಿ ಮರಳು ಸುರಿಯುತ್ತಿತ್ತು.

ಪುಟ್ಟಣ್ಣ ಮತ್ತು ಚಿಟ್ಟೆ ಅಜ್ಜನ ಕೈಹಿಡಿದು ಮನೆಯ ಹಿಂಬಾಗಕ್ಕೆ ಕರೆದೊಯ್ದರು. ಟಾರ್ಚಿನ ಬೆಳಕನ್ನು ಮಡಿಕೆಗಳಿದ್ದ ಜಾಗಕ್ಕೆ ಹಾಯಿಸಿದಾಗ ಅಲ್ಲೇನೋ ಇರಲಿಲ್ಲ. ಮತ್ತೆ ಮೆಲ್ಲನೆ ಗುಂಪನ್ನು ಸಿರಿಕೊಂಡರು. ಗುಂಪಿನ ಹಿಂದೆ ನಿಂತಿದ್ದ ವೇಣು ಮತ್ತು ದಿನು ಕಾಣಿಸಿದರು. ಅಜ್ಜ ತಮ್ಮ ಜೊತೆ ಬಂದಿದ್ದ ಒಂದಿಬ್ಬರಿಗೆ ಸೂಚನೆ ನೀಡಿದರು. ಅವರೆಲ್ಲಾ ವೇಣು ಮತ್ತು ದಿನುವಿನ ಹತ್ತಿರ ಸಹಜವೆಂಬಂತೆ ಸಾಗಿ ಅವರ ಕೈಗಳನ್ನು ಹಿಡಿದರು. ತುಂಬುತೋಳಿನ ಅಂಗಿಯ ಕೈಯಳ್ಲೀಲ್ಲಾ ಕಲ್ಲುಗಳು.

ಎಳೆದು ತಂದು ನಡುವಿನಲ್ಲಿ ನಿಲ್ಲಿಸಿ ಕೇಳಿದಾಗ ತಾವೇ ಮಾಡಿದ್ದಾಗಿ ಒಪ್ಪಿಕೊಂಡರು. ಅವರಜ್ಜ ಸೋಮ ಯಾವುದೋ ತಪ್ಪಿಗಾಗಿ ಅವರನ್ನು ದಂಡಿಸಿದಾಗ ಅಜ್ಜನಿಗೆ ಹೆದರಿಸಲು ಈ ನಾಟಕ ಶುರು ಮಾಡಿದ್ದರು. ಅದರಿಂದಾಗುವ ಲಾಭವನ್ನು ಕಂಡು ಅದನ್ನು ಮುಂದುವರೆಸಿದ್ದರು. ತೂತಾದ ಮಡಕೆಯಲ್ಲಿ ಮರಳು ತುಂಬಿ ಕಟ್ಟಲಾದ ಮೇಲೆ ಮರದ ಹಲಗೆಯ ಅಟ್ಟದಲ್ಲಿಡುತ್ತಿದ್ದರು. ಅದು ನಿಧಾನಕ್ಕೆ ಕೆಳಗೆ ಸುರಿಯುತ್ತಾ ಇರುತ್ತಿತ್ತು. ಕಲ್ಲುಗಳನ್ನು ತಮ್ಮ ಅಂಗಿಗಳಲ್ಲೇ ಬಚ್ಚಿಟ್ಟುಕೊಂಡು ಗುಂಪಿನ ಹಿಂದೆ ನಿಂತು ತಾವೇ ಮೇಲಕ್ಕೆ ಎಸೆಯುತ್ತಿದ್ದರು. ಎಲ್ಲರೂ ಕತ್ತಲೆಯಲ್ಲಿ ಬೀಳುತ್ತಿರುವ ಕಲ್ಲನ್ನು ನೋಡಿ ಭಯ ಪಡುತ್ತಿದ್ದರು.

ಪುಟ್ಟಣ್ಣ ಮತ್ತು ಚಿಟ್ಟೆಗೆ ಊರವರಿಂದ ಶಹಬ್ಭಾಸ್ ಸಿಕ್ಕಿತು. ಅಜ್ಜ,’ ನೀವಿನ್ನೂ ಪುಟ್ಟವರು. ಅವಸರಪಟ್ಟು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಾರದು. ದೊಡ್ಡವರನ್ನು ಕರೆದುಕೊಂಡೇ ಸಾಹಸ ಮಾಡಿ’ ಎಂದು ಬುದ್ಧಿವಾದ ಹೇಳುತ್ತಾ ಮಕ್ಕಳ ಜಾಣತನವನ್ನು ಹೊಗಳಿದರು.
ಆಧಾರ : ವಿಜಯಕರ್ನಾಟಕ.ಇಂಡಿಯನ್ಟೈಮ್ಸ್.ಕಾಂ

[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.81 ( 21 votes)

ಇವುಗಳೂ ನಿಮಗಿಷ್ಟವಾಗಬಹುದು

ಅಧಿಕಾರದ ಮದದಲ್ಲಿ ತೇಲಬೇಡ

ಅಧಿಕಾರದ ಮದದಲ್ಲಿ ತೇಲಬೇಡ

ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ …

Leave a Reply

Your email address will not be published. Required fields are marked *