ಒಂದು ಊರಿನಲ್ಲಿ ಒಂದು ಕತ್ತೆ ವಾಸವಾಗಿತ್ತು. ಅದರ ಹೆಸರು “ಕೆಂಪಿ” ಅದು ತನ್ನ ಮರಿಗಳೊಂದಿಗೆ ಪಾಳು ಬಿದ್ದ ಹೊಲದ ಬಯಲಿನಲ್ಲಿ ಮೊಳೆತಿದ್ದ ಹುಲ್ಲನ್ನು ಮೇಯುತ್ತಿತ್ತು. ಇದನ್ನು ದೂರದಿಂದ ನೋಡಿದ ನರಿಯೊಂದು ದೂರಾಲೋಚನೆಗೈದಿತ್ತು. ಹೇಗಾದರೂ ಮಾಡಿ ಕತ್ತೆಯ ಮರಿಗಳನ್ನು ತಿನ್ನಬೇಕೆಂಬುದೇ ಅದರ ಉಪಾಯವಾಗಿತ್ತು. ಸಮಯ ಸಂದರ್ಭ ನೋಡಿಕೊಂಡು ಕತೆಯ ಸ್ನೇಹ ಗಳಿಸಿಕೊಳ್ಳಬೇಕು. ಅಂದಾಗ ಮಾತ್ರ ತನ್ನ ಕೆಲಸ ಸುಲಭ ಎಂಬುದಾಗಿ ಯೋಚಿಸಿತು.
ಕೆಂಪಿಯ ಬಳಿ ಬಂದ ನರಿಯು “ಕೆಂಪಕ್ಕಾ… ಕೆಂಪಕ್ಕಾ… ಚೆನ್ನಾಗಿರುವೆಯಾ? ನಿನ್ನ ಮಕ್ಕಳೆಲ್ಲಾ ಆರೋಗ್ಯದಿಂದಿವೆಯಾ? ನಿನ್ನ ಒಳ್ಳೆಯ ಸ್ವಭಾವವನ್ನು ಮನಗಂಡಿರುವೆ. ಹಾಗಾಗಿಯೇ ನಿನ್ನ ಸ್ನೇಹ ಬಯಸಿ ಬಂದಿರುವೆ. ನನ್ನನ್ನು ನಿನ್ನ ಮಿತ್ರನಾಗಿ ಸ್ವೀಕರಿಸುವೆಯಾ?” ಎಂದು ಅತಿ ವಿನಯದಿಂದ ನರಿ ಕೇಳಿತು.
“ನರಿಯೇ, ನನ್ನೊಂದಿಗೆ ನಿನ್ನದೇನು ಸ್ನೇಹ, ಮಾತು? ನೀನು ಮೊದಲೇ ಠಕ್ಕ ನರಿ. ನನಗೆ ಮೋಸ ಮಾಡುವ ಉದ್ದೇಶದಿಂದಲೇ ಇಲ್ಲಿಯತನಕ ಬಂದಿರುವೆಯಲ್ಲವೇ? ನನಗೆ ನಿನ್ನ ಸಹವಾಸವೇ ಬೇಡ. ಮೊದಲು ಇಲ್ಲಿಂದ ಹೊರಟು ಹೋಗು” ಹೀಗೆ ಗದರಿಸಿತು ಕೆಂಪಿ.
“ಯಾಕೆ ಕೆಂಪಿ ಹಿಂಗಂತಿಯಾ? ನಾವು ಒಬ್ಬರಿಗೊಬ್ಬರು ಸಹಾಯ, ಸಹಕಾರ ತತ್ವದಡಿಯಲ್ಲಿ ಬಾಳಬೇಕು. ನಾನೀಗ ಮೊದಲಿನಂತಿಲ್ಲ. ತುಂಬಾ ಒಳ್ಳೆಯವನಾಗಿದ್ದೇನೆ. ನನ್ನನ್ನು ನಂಬು” ಎಂದು ನರಿಯೂ ಕೆಂಪಿಯಲ್ಲಿ ವಿನಂತಿಸಿಕೊಂಡಿತು. ಮತ್ತೆ ನರಿಯು “ನಾನೀಗ ಒಳ್ಳೆಯ ಸಲಹೆ ನೀಡಲು ಬಂದಿರುವೆ. ಈ ಪ್ರದೇಶದಲ್ಲಿ ಹುಲ್ಲೇ ಇಲ್ಲವಲ್ಲ! ನೀವೆಲ್ಲಾ ಹಸಿವೆಯಿಂದ ತೀರಾ ಬಡಕಲಾಗಿರುವಿರಿ. ಇಲ್ಲೆ ಸನಿಹದಲ್ಲಿ “ಹಸಿರುವನ” ವೆಂಬ ಸಂಪಾತ್ಬರೀತ ಹುಲ್ಲುಗಾವಲು ಪ್ರದೇಶವಿದೆ. ಬೇಕಾದರೆ ನೀನು ಈಗಲೇ ಹೋಗಿ ನೋಡಿಕೊಂಡು ಬಾ. ಆಗಲಾದರೂ ನನ್ನ ಮೇಲೆ ನಿನಗೆ ನಂಬಿಕೆ ಬಂದಿತು’ ಎಂದು ನರಿ ನಯವಾಗಿ ಹೇಳಿತು.
[sociallocker]”ನಾನು ಇಲ್ಲಿಂದ ಹೋದರೆ ನೀನು ನನ್ನ ಮರಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತೀಯಾ ಎಂಬ ನಂಬಿಕೆ ನನಗಿಲ್ಲ” ಎಂದ ಕೆಂಪಿಗೆ, “ನಿನ್ನ ಮರಿಗಳನ್ನು ನಾನು ನನ್ನ ಸ್ವಂತ ಮಕ್ಕಳಿಗಿಂತಲೂ ಚೆನ್ನಾಗಿ ನೋಡಿಕೊಳ್ಳುವೆ” ಎಂದು ತನ್ನ ಮಾತಿನ ಮೋಡಿಯಿಂದ ಕೆಂಪಿಯನ್ನು ನಂಬಿಸಿದ ನರಿ ಅದನ್ನು ಉಳ್ಳುಗಾವಳಿಗೆ ಕಳುಹಿಸಿತು. ಕೆಂಪಿಯೂ ಹುಲ್ಲುಗಾವಲನ್ನು ನೋಡಿಕೊಂಡು ಬರುವುದರೊಳಗಾಗಿ ಅದರ ಒಂದು ಮರಿಯನ್ನು ಕಾಣದಂತೆ ಮಾಡಿತ್ತು ನಯವಂಚಕ ನರಿ. ಕೆಂಪಿಯೂ ತಿರುಗಿ ಬಂದು ನೋಡಿದಾಗ ಒಂದು ಮರಿ ಕಡಿಮೆ ಇರುವುದು ಗಮನಕ್ಕೆ ಬಂತು.
“ನರಿಯಣ್ಣಾ, ನನ್ನ ಐದು ಮರಿಗಳಲ್ಲಿ ಒಂದು ಮರಿ ಕಾಣಿಸುತ್ತಿಲ್ಲವಲ್ಲಾ! ಎಲ್ಲಿ ಹೋಯಿತು?” ಎಂದು ಆತಂಕದಿನ ಕೇಳಿತು… “ಅಯ್ಯೋ ಕೆಂಪಿ… ನಿನ್ನ ಮರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಳಜಿಯಿಂದ ನೋಡಿಕೊಂಡಿರುವೆ. ಇದ್ದಿದ್ದೇ ನಾಲ್ಕು ಮರಿಗಳು, ನಿನಗೋ ಲೆಕ್ಕ ಸರಿಯಾಗಿ ಬರದು ದಡ್ಡ ಕತ್ತೆ” ಎಂದು ನರಿ ಹಂಗಿಸಿ ನಕ್ಕಿತು.
ಕೆಂಪಿಗೆ ನರಿಯ ಠಕ್ಕತಾಣದ ಅರಿವಿದ್ದರೂ ಪ್ರತ್ಯಕ್ಷ ಕಂಡ ಮೇಲೆ ಸರಿಯಾಗಿ ಬುದ್ಧಿ ಕಳಿಸೋಣವೆಂದು ಸುಮ್ಮನಾಯಿತು. ಮಾರನೇ ದಿನ ಮುಂಜಾನೆ ಕೆಂಪಿಯ ಮನೆಗೆ ಬಂದ ನರಿಯು “ಕೆಂಪಕ್ಕಾ… ಇಂದು ನೀನು ಹಸಿರುವನಕ್ಕೆ ಹೋಗಿ ಆರಾಮಾಗಿ ಹೊಟ್ಟೆ ತುಂಬಾ ತಿಂದುಕೊಂಡು ಬಾ. ನೀನು ಬರುವವರೆಗೂ ನಿನ್ನ ಮರಿಗಳನ್ನು ಜೋಪಾನವಾಗಿ ನೋಡಿಕೊಳ್ಳುವೆ” ಎಂದಿತು. ಕೆಂಪಿಯೂ ಸಹ ನರಿಯ ಮಾತಿಗೆ “ಆಗಲಿ ಹಾಗೆಯೇ ಮಾಡುತ್ತೇನೆ” ಎಂದು ಅಲ್ಲಿಂದ ಮರೆಯಾಯಿತು. ನಿಜವಾಗಿಯೂ ಅಂದು ಕೆಂಪಿಯು ಹುಲ್ಲನ್ನು ಮೇಯಲು ಹೋಗಲಿಲ್ಲ. ಬದಲಾಗಿ ಅಲ್ಲಿಯೇ ಪಕ್ಕದ ಮರೆಯಲ್ಲಿ ಹೊಂಚು ಹಾಕಿ ಕುಳಿತು ನರಿಯೂ ಏನು ಮಾಡುತ್ತದೆಂದು ನೋಡುತ್ತಿತ್ತು.
ನರಿಯು ಕೆಂಪಿಯ ಮರಿಗಳಲ್ಲಿ ಯಾವುದು ಮೃದುವಾಗಿದೆ ಎಂದು ಮುಟ್ಟಿಮುಟ್ಟಿ ನೋಡಿ. ಬಲಾಢ್ಯ ಮರಿಯೊಂದರ ಕೊರಳಿಗೆ ಬಾಯಿ ಹಾಕುವುದರಲ್ಲಿತ್ತು.
ಅಷ್ಟರಲ್ಲಿ ಕೆಂಪಿಯು “ನರಿಯಣ್ಣಾ.. ಬೇಗ ಬಾ ಕಾಲಿಗೆ ಮುಳ್ಳು ಚುಚ್ಚಿಕೊಂಡಿದೆ” ಎಂದು ಜೋರಾಗಿ ಕೂಗಿತು.
ಆಗ ಗಾಬರಿಗೊಂಡ ನರಿಯೂ ಕೆಂಪಿಯ ಮರಿಗಳನ್ನು ಅಲ್ಲಿಯೇ ಬಿಟ್ಟು ಕೆಂಪಿಯ ಬಳಿ ಓಡಿ ಬಂತು. ಆಗ ಕೆಂಪಿಯು “ಕಾಲಿಗೆ ಮುಳ್ಳು ನಾಟಿರುವುದರಿಂದ ನಡೆದಾಡಲಾಗದೇ ಕುಳಿತೆ. ಮುಳ್ಳು ತೆಗೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ನೀನಾದರೂ ಪ್ರಯತ್ನಿಸಿ ನೋಡು” ಎಂದಿತು.
ನರಿಯು “ಯಾವ ಕಾಲು?” ಎಂದು ಕೇಳಿದಾಗ “ಹಿಂದಿನ ಕಾಲು” ಎಂದಿತು ಕೆಂಪಿ.
ಮುಳ್ಳು ತೆಗೆಯಲು ಹಿಂದಿನ ಕಾಲು ಬಳಿ ಬಂದ ನರಿಯು ಮುಳ್ಳನ್ನು ಹುಡುಕುತ್ತಿತ್ತು. ಮರಿಯೊಂದನ್ನು ಕಳೆದುಕೊಂಡ ದುಃಖದಲ್ಲಿ, ತೀವ್ರ ಕೋಪಗೊಂಡು ರೋಷಾವೇಶದಿಂದ ಜೋರಾಗಿ ನರಿಯ ಒದೆಯಿತು. ಮೋಸಗಾರ ನರಿಯ ಕೆಂಪಿಯ ಹೊಡೆತಕ್ಕೆ ಮುಗ್ಗರಿಸಿ ಬಿದ್ದಿದ್ದು ಮತ್ತೆ ಮೇಲೇಳಲಿಲ್ಲ.
ನೀತಿ
ಈ ಕಾಲದಲ್ಲಿ ಯಾರನ್ನೂ ಸಹ ನಂಬಬಾರದು
ನಮಗೆ ನಮ್ಮವರೇ ಆಗೋಲ್ಲ ಅಂದಮೇಲೆ, ಬೇರೆಯವರು ಎಲ್ಲಿ ಆಗುತ್ತಾರೆ?[/sociallocker]
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.